ಪ್ರಜಾಸ್ತ್ರ ವಿಜ್ಞಾನ ಮತ್ತು ತಂತ್ರಜ್ಞಾನ
ನವದೆಹಲಿ: ದೇಶದಲ್ಲಿನ ಅಭಿವ್ಯಕ್ತಿ ಸ್ವಾತಂತ್ರ್ಯ ಹಾಗೂ ಪೊಲೀಸರಿಂದ ಬೆದರಿಸುವ ಕ್ರಮದ ಕುರಿತು ಟ್ವೀಟರ್ ಆತಂಕ ವ್ಯಕ್ತಪಡಿಸಿತ್ತು. ಇದಕ್ಕೆ ಕೇಂದ್ರ ಸರ್ಕಾರ ತಿರುಗೇಟು ನೀಡಿದ್ದು, ಟ್ವೀಟರ್ ಈ ನೆಲದ ಕಾನೂನು ಪಾಲಿಸಬೇಕು. ಇದೊಂದು ಸಾಮಾಜಿಕ ಮಾಧ್ಯಮವಷ್ಟೇ. ಭಾರತದ ಕಾನೂನಿನ ಚೌಕಟ್ಟು ಹೇಗಿರಬೇಕು ಅನ್ನೋದು ನಿರ್ಧರಿಸುವ ಯಾವ ಪಾತ್ರವಿಲ್ಲ ಎಂದಿದೆ.
ಟ್ವೀಟರ್ ಕಚೇರಿಗೆ ಪೊಲೀಸರು ಭೇಟಿ ನೀಡಿದ ಕುರಿತು ಹಾಗೂ ತನ್ನ ಸಿಬ್ಬಂದಿಯ ಭದ್ರತೆಯ ಕುರಿತು ಟ್ವೀಟ್ ಮಾಡಿತ್ತು. ಇದಕ್ಕೂ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಉತ್ತರ ನೀಡಿದೆ. ಟ್ವೀಟರ್ ಸೇರಿದಂತೆ ಇತರೆ ಮಾಧ್ಯಮ ಸಂಸ್ಥೆಗಳ ಸಿಬ್ಬಂದಿ ಭಾರತದಲ್ಲಿ ಸದಾ ಸುರಕ್ಷಿತವಾಗಿರುತ್ತಾರೆ ಎಂದಿದೆ.
ಕೇಂದ್ರದ ವಿರುದ್ಧ ನಡೆದಿದೆ ಎನ್ನಲಾದ ಟೂಲ್ ಕಿಟ್ ವಿಚಾರಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಬರುವಂತೆ ಟ್ವೀಟರ್ ಕಾರ್ಯನಿರ್ವಹಾಕರನ್ನ ದೆಹಲಿ ಪೊಲೀಸರು ಕೇಳಿದ್ರು. ಅಲ್ದೇ, ಗುರ್ ಗ್ರಾಮದಲ್ಲಿರುವ ಟ್ವೀಟರ್ ಕಚೇರಿಗೆ ನೋಟಿಸ್ ನೀಡಲು ಹೋಗಿದ್ರು.