ಸರ್ವೇ ಮುಗಿದ ನಂತರ ಪಿಎಫ್ಐ ಆಸ್ತಿ ಮುಟ್ಟುಗೋಲು

152

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಪಿಎಸ್ಐ ಸಂಘಟನೆಯ ಸರ್ವೇ ಮುಗಿದ ನಂತರ, ಅದರ ಮುಖಂಡರ ಆಸ್ತಿ ಮುಟ್ಟುಗೋಲು ಮಾಡಲಾಗುತ್ತದೆ ಅನ್ನೋ ವಿಚಾರವನ್ನು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.

ಪಿಎಫ್ಐ ಸಂಘಟನೆ ನಿಷೇಧದ ಬಳಿಕ ಅದರ ಅಧಿಕೃತ ಅಕೌಂಟ್ ಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಈ ಖಾತೆಗಳಲ್ಲಿ ಕೋಟ್ಯಾಂತರ ರೂಪಾಯಿ ಹಣವಿದೆ. ಕೆಲ ಸಾಮಾನ್ಯ ಕಾರ್ಯಕರ್ತರ ಖಾತೆಗಳಲ್ಲಿಯೂ ಲಕ್ಷಾಂತರ ರೂಪಾಯಿ ಹಣವಿದೆ. ಅದು ವಿದೇಶದಿಂದ ಬಂದ ದೇಣಿಗೆ ಹಣವಾಗಿದ್ದು, ಯುಪಿಐ, ಕ್ಯೂಆರ್ ಕೋಡ್ ಬಳಸಿ ಹಲವು ಬಾರಿ ಹಣ ವರ್ಗಾವಣೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಮಂಗಳೂರಿನಲ್ಲಿ 12 ಪಿಎಫ್ಐ ಕಚೇರಿಗಳನ್ನು ಬಂದ್ ಮಾಡಲಾಗಿದೆ. ಇನ್ನು ಸಂಘಟನೆಯಿಂದ ದೂರ ಇರಲು, ಅದರಿಂದ ಹೊರ ಬರಲು ಕಾರ್ಯಕರ್ತರಿಗೆ ಅವಕಾಶ ನೀಡಲಾಗುತ್ತದೆ. ದೋಷಾರೋಪಣೆಯ ದಾಖಲೆ ಕಂಡು ಬಂದರೆ ಅಂತವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಲಾಗಿದೆ.




Leave a Reply

Your email address will not be published. Required fields are marked *

error: Content is protected !!