ಒಂದು ಕುಟುಂಬ ಒಂದು ಟಿಕೆಟ್

465

ಪ್ರಜಾಸ್ತ್ರ ಸುದ್ದಿ

ಉದಯಪುರ: ಕಾಂಗ್ರೆಸ್ ಪಕ್ಷದ ವತಿಯಿಂದ ರಾಜಸ್ಥಾನದ ಉದಯಪುರದಲ್ಲಿ ಚಿಂತನಾ ಸಮೇಶ ನಡೆಸಲಾಗುತ್ತಿದೆ. ಇದರಲ್ಲಿ ಎಐಸಿಸಿ ಅಧಿನಾಯಕಿ ಸೋನಿಯಾ ಗಾಂಧಿ, ಯುವ ನಾಯಕ ರಾಹುಲ್ ಗಾಂಧಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ, ಕೆ.ಸಿ ವೇಣು ಗೋಪಾಲ್, ಕರ್ನಾಟಕ ಮಾಜಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಅನೇಕರು ಭಾಗವಹಿಸಿದ್ದಾರೆ.

ಚಿಂತನಾ ಸಮಾವೇಶದಲ್ಲಿ ಒಂದು ಕುಟುಂಬಕ್ಕೆ ಒಂದೇ ಟಿಕೆಟ್ ಅನ್ನೋ ತೀರ್ಮಾನಕ್ಕೆ ಬರಲಾಗಿದೆ. ಇದು ಗಾಂಧಿ ಕುಟುಂಬಕ್ಕೆ ಹೊರತುಪಡಿಸಿ ಇರುತ್ತೆ. ಕನಿಷ್ಠ ಐದು ವರ್ಷ ಕೆಲಸ ಮಾಡದ ನಾಯಕರ ಕುಟುಂಬದ ಸದಸ್ಯರಿಗೆ ಟಿಕೆಟ್ ನೀಡಬಾರದು ಅನ್ನೋ ವಿಚಾರಕ್ಕೂ ಸಹಮತವಿದೆ ಎಂದು ತಿಳಿದು ಬಂದಿದೆ.

5 ವರ್ಷಕ್ಕಿಂತ ಹೆಚ್ಚು ಕಾಲದಿಂದ ಒಂದೇ ಹುದ್ದೆಯಲ್ಲಿರುವವರು ಅದನ್ನು ತೊರೆಯಬೇಕು. ಮತ್ತೆ ಆ ಸ್ಥಾನಕ್ಕೆ ಬರಬೇಕು ಅಂದರೆ ಮೂರು ವರ್ಷ ಕಾಯಬೇಕು ಅನ್ನೋ ವಿಚಾರ ಸೇರಿದಂತೆ ದೊಡ್ಡ ಮಟ್ಟದ ಸಾಂಸ್ಥಿಕ ಬದಲಾವಣೆ ತರುವ ಕೆಲಸ ನಡೆದಿದೆ. ಇಂದಿನಿಂದ ಮೂರು ದಿನಗಳ ಕಾಲ ಈ ಸಮಾವೇಶ ನಡೆಯಲಿದೆ.




Leave a Reply

Your email address will not be published. Required fields are marked *

error: Content is protected !!