ಮಂಗಳೂರಿನಲ್ಲಿ ಮತ್ತೊಂದು ವಿವಾದಾತ್ಮಹ ಬರಹ

248

ಪ್ರಜಾಸ್ತ್ರ ಸುದ್ದಿ

ಮಂಗಳೂರು: ಇತ್ತೀಚೆಗಷ್ಟೇ ಜಿಲ್ಲೆಯಲ್ಲಿ ಉಗ್ರರಿಗೆ ಬೆಂಬಲಿಸಿ ಬರೆದಿದ್ದ ಬರಹದ ತನಿಖೆ ನಡೆಯುತ್ತಿದ್ದು, ಆ ಘಟನೆ ಮಾಸುವ ಮುನ್ನವೇ ಮತ್ತೊಂದು ವಿವಾದಾತ್ಮಹ ಬರಹ ಬರೆಯಲಾಗಿದೆ. ನಗರದ ಕೋರ್ಟ್ ರಸ್ತೆಯಲ್ಲಿ ಉರ್ದುವಿನಲ್ಲಿ ವಿವಾದಾತ್ಮಕ ಬರಹ ಬರೆಯಲಾಗಿದೆ.

ಕೋರ್ಟ್ ರಸ್ತೆ ಆವರಣದಲ್ಲಿರುವ ಹಳೆ ಪೊಲೀಸ್ ಲೇಔಟ್ ಕಟ್ಟಡದ ಮೇಲೆ ಕಿಡಿಗೇಡಿಗಳು, ಪ್ರವಾದಿಗಳಿಗೆ ಕೋಪ ಬಂದರೆ ಒಂದೇ ಶಿಕ್ಷೆ. ತಲೆ ದೇಹದಿಂದ ಬೇರ್ಪಡೆ ಮಾಡುವುದು ಅನ್ನೋ ಅರ್ಥದಲ್ಲಿ ಬರೆಯಲಾಗಿದೆ. ಸ್ಥಳಕ್ಕೆ ಬಂದಿರುವ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

ಕಳೆದ ಎರಡ್ಮೂರು ದಿನಗಳ ಹಿಂದೆ ನಗರ ಬಿಜೈ ಹತ್ತಿರದ ಅಪಾರ್ಟ್ ಮೆಂಟ್ ವೊಂದರ ಗೋಡೆಯ ಮೇಲೆ ಉಗ್ರರ ಸಂಘಟನೆಗಳಿಗೆ ಬೆಂಬಲಿಸಿ ಬರಹ ಬರೆಯಲಾಗಿತ್ತು. ಇದನ್ನ ಬರೆದ ಕಿಡಿಗೇಡಿಗಳ ವಿರುದ್ಧ ಸೂಕ್ತ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಪ್ರತಿಭಟನೆಗಳು ಸಹ ನಡೆದಿವೆ.




Leave a Reply

Your email address will not be published. Required fields are marked *

error: Content is protected !!