ನಾಲ್ಕೇ ದಿನದಲ್ಲಿ ಗಣಿನಾಡಲ್ಲಿ 21 ಮಂದಿ ಸಾವು

303

ಪ್ರಜಾಸ್ತ್ರ ಸುದ್ದಿ

ಬಳ್ಳಾರಿ: ಕರೋನಾ ಮಹಾಮಾರಿ ಎಷ್ಟೊಂದು ಭೀಕರ ಅನ್ನೋದು ಜನರಿಗೆ ಅರ್ಥವಾಗಿದೆ. ಇಂಥಾ ಮಾರಕ ರೋಗಕ್ಕೆ ಗಣಿನಾಡಿನಲ್ಲಿ ಕೇವಲ 4 ದಿನದಲ್ಲಿ ಬರೋಬ್ಬರಿ 21 ಮಂದಿ ಸಾವನ್ನಪ್ಪಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಇದುವರೆಗೂ ಸಾವನ್ನಪ್ಪಿದವರ ಸಂಖ್ಯೆ 29 ಆಗಿದೆ.

ಜೂನ್ 27ರಂದು 2, 28ರಂದು 4, 29ರಂದು 9, 30ರಂದು 6 ಜನ ಸಾವನ್ನಪ್ಪುವ ಮೂಲಕ ಕೇವಲ 4ದಿನಗಳಲ್ಲಿ 21 ಜನ ಕೋವಿಡ್ 19ಗೆ ಬಲಿಯಾಗಿದ್ದಾರೆ. ಬೆಂಗಳೂರು ನಂತರ ಅತೀ ಹೆಚ್ಚು ಸಾವು ದಾಖಲಾಗಿರುವುದು ಬಳ್ಳಾರಿಯಲ್ಲಿ. ಸಿಲಿಕಾನ್ ಸಿಟಿಯಲ್ಲಿ 56 ಮಂದಿ ಸಾವನ್ನಪ್ಪಿದ್ರೆ, ಬಳ್ಳಾರಿಯಲ್ಲಿ 29 ಜನ ಮೃತಪಟ್ಟಿದ್ದಾರೆ.




Leave a Reply

Your email address will not be published. Required fields are marked *

error: Content is protected !!