ವಿಜಯಪುರ: ಕರೋನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಸಾವಿರಾರು ಕೋಳಿಗಳನ್ನ ಜೀವಂತವಾಗಿ ಮುಚ್ಚಿ ಹಾಕಲಾಗ್ತಿದೆ. ವಿಜಯಪುರದಲ್ಲಿ ಸಾವಿರಾರು ಕೋಳಿಗಳ ಮಾರಣ ಹೋಮ ನಡೆದಿದೆ. ಜಿಲ್ಲೆಯ ಬಬಲೇಶ್ವರದ ಯಕ್ಕುಂಡಿಯಲ್ಲಿ ಕೋಳಿಗಳ ಮಾರಣಹೋಮ ನಡೆಸಲಾಗಿದೆ.
ಗುಡೇಸಾಬ ಜಮಾದಾರ ಎಂಬುವರಿಗೆ ಸೇರಿದ ಬರೋಬ್ಬರಿ 2,500 ಕೋಳಿಗಳನ್ನ ತಮ್ಮ ಜಮೀನಿನಲ್ಲಿ ತೆಗ್ಗು ತೆಗೆದು ಮುಚ್ಚಲಾಗಿದೆ. ಇದರ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗಿದ್ದು, ಸ್ಥಳೀಯರು ಗುಡೇಸಾಬ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಆರೋಗ್ಯ ಇಲಾಖೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕಿದೆ.