ಪ್ರಜಾಸ್ತ್ರ ಸುದ್ದಿ
ಮೈಸೂರು: ಕೋವಿಡ್ ಸಂದರ್ಭದಲ್ಲಿ ರಾಜ್ಯ ಬಿಜೆಪಿ ಸರ್ಕಾರ ಲಂಚ ಪಡೆದಿದೆ. ಶೇಕಡ 40ರಷ್ಟು ಕಮಿಷನ್ ಕೊಟ್ಟರೆ ರಾಜ್ಯ ಅಭಿವೃದ್ಧಿಯಾಗುತ್ತಾ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದರು. ಇಂತಹ ಭ್ರಷ್ಟಾಚಾರ ಸರ್ಕಾರವನ್ನು ನಾನು ನೋಡಿಲ್ಲವೆಂದರು.
ದೇಶದಲ್ಲಿ ಪೆಟ್ರೋಲ್, ಡೀಸೆಲ್ ಸೇರಿ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ. ಇದರಿಂದಾಗಿ ಜನರು ಬದುಕಲು ಸಾಧ್ಯವಾಗುತ್ತಿಲ್ಲ. ಇದೆ ರೀತಿಯ ಪರಿಸ್ಥಿತಿ ಮುಂದುವರದರೆ ಸಂಬಳ, ಪಿಂಚಣಿ ಕೊಡಲು ಸಹ ಸರ್ಕಾರದ ಹತ್ತಿರ ಹಣ ಇರಲ್ಲ ಎಂದು ಕಿಡಿ ಕಾರಿದರು.