ಬೆಂಗಳೂರು: ಕರೋನಾ ಕಾರ್ಮೋಡ ಕರ್ನಾಟಕದಲ್ಲಿಯೂ ತನ್ನಾಟ ಮುಂದುವರೆಸಿದೆ. ಇದರ ನಡುವೆ ಖುಷಿಯ ವಿಚಾರ ಅಂದ್ರೆ, ರಾಜ್ಯದ 13 ಜಿಲ್ಲೆಗಳಲ್ಲಿ ಕರೋನಾ ಸೋಂಕು ದೃಢಪಟ್ಟಿಲ್ಲ. ಹೀಗಾಗಿ ಆ ಜಿಲ್ಲೆಗಳನ್ನ ಗ್ರೀನ್ ಝೋನ್ ಗೆ ಸೇರಿಸಲಾಗಿದೆ. ಅಲ್ದೇ ಅಲ್ಲಿ ಕೆಲ ಷರತ್ತುಗಳೊಂದಿಗೆ ಸಹಜ ಜೀವನಕ್ಕೆ ಅವಕಾಶ ಮಾಡಿಕೊಡಲಾಗಿದೆ.
ಕೊಪ್ಪಳ, ಕೋಲಾರ, ಚಾಮರಾಜನಗರ, ರಾಯಚೂರು, ಹಾವೇರಿ, ಯಾದಗಿರಿ, ಹಾಸನ, ಚಿತ್ರದುರ್ಗ, ಶಿವಮೊಗ್ಗ, ದಾವಣಗೆರೆ, ಉಡುಪಿ ಹಾಗೂ ಚಿಕ್ಕಮಗಳೂರು ಸೇರಿದಂತೆ ಕೊಡಗು ಜಿಲ್ಲೆಗೂ ವಿನಾಯ್ತಿ ಸಿಕ್ಕಿದೆ. ಈ 13 ಜಿಲ್ಲೆಗಳಿಗೆ ಅನ್ವಯವಾಗುತ್ತೆ ಹೊಸ ಮಾರ್ಗಸೂಚಿಗಳನ್ನ ನೀಡಲಾಗಿದೆ. ಇನ್ನು ರಾಮನಗರದಲ್ಲಿ ಕೈಗಾರಿಕೆ ಬಿಟ್ಟು ಅಂಗಡಿಗಳನ್ನ ತೆರೆಯಲು ಅವಕಾಶ ನೀಡಲಾಗಿದೆ.
ಮಾರುಕಟ್ಟೆ, ಕಾಂಪ್ಲೆಕ್ಸ್ ಗಳಲ್ಲಿ ಕೆಲಸಕ್ಕೆ ಅವಕಾಶ
ಶೇಕಡ 50 ರಷ್ಟು ಕಾರ್ಮಿಕರು ಕೆಲಸ ಮಾಡಲು ಅನುಮತಿ
ಸಣ್ಣ ಅಂಗಡಿಗಳು, ಪಾಲಿಕೆ ವ್ಯಾಪ್ತಿಯ ಅಂಗಡಿಗಳು ತೆರಯಬಹುದು
ಸಾಮಾಜಿಕ ಅಂತರ, ಮಾಸ್ಕ್ ಧರಿಸುವುದು ಕಡ್ಡಾಯ
ಈ ಮಾರ್ಗಸೂಚಿ ಮೇ 3ರ ತನಕ ಮಾತ್ರ ಅನ್ವಯ
ಬೆಂಗಳೂರು ಗ್ರಾಮಾಂತರ, ಮಂಡ್ಯ, ತುಮಕೂರು, ಚಿಕ್ಕಬಳ್ಳಾಪುರ, ಉತ್ತರ ಕನ್ನಡ, ಧಾರವಾಡದಲ್ಲಿ ಅಂಗಡಿ ಮಾತ್ರು ಕೈಗಾರಿಕೆಗೆ ಅನುಮತಿ ನೀಡುವುದು ಜಿಲ್ಲಾ ಉಸ್ತುವಾರಿ ಸಚಿವರ ನಿರ್ಧಾರಕ್ಕೆ ಬಿಡಲಾಗಿದೆ.
ಇನ್ನು ಬೆಂಗಳೂರು ನಗರ, ಮೈಸೂರು, ಬೆಳಗಾವಿ, ವಿಜಯಪುರ, ಕಲಬುರಗಿ, ಬಾಗಲಕೋಟೆ, ಬೀದರ ಹಾಗೂ ದಕ್ಷಿಣ ಜಿಲ್ಲೆಗಳಿಗೆ ಮಾರ್ಗಸೂಚನೆ ಅನ್ವಯವಾಗುವುದಿಲ್ಲ. ಇಲ್ಲಿ ಲಾಕ್ ಡೌನ್ ಮುಂದುವರೆಯಲಿದೆ. ಇದರ ಜೊತೆಗೆ ಸಧ್ಯಕ್ಕೆ ಎಲ್ಲಿಯೂ ಮದ್ಯ ಮಾರಾಟಕ್ಕೆ ಅವಕಾಶವಿಲ್ಲ.