ಮಂಡ್ಯ: ಕರೋನಾದಿಂದ ಗುಣಮುಖರಾಗಿ ಮನೆಗೆ ಬಂದವರನ್ನ ಆರತಿ ಮಾಡಿ ಸ್ವಾಗತ ಕೋರಲಾಯ್ತು. ನಗರದ ಸ್ವರ್ಣಸಂದ್ರ ಬಡಾವಣೆಯಲ್ಲಿ ಕರೋನಾ ಪಾಸಿಟಿವ್ ಬಂದಿದ್ದ ವ್ಯಕ್ತಿ, ಸಂಪೂರ್ಣ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದು ಕುಟುಂಬಸ್ಥರು ಸಂತಸದಿಂದ ಆರತಿ ಮಾಡಿ ಸ್ವಾಗತಿಸಿದ್ರು.
ಮೈಸೂರಿನ ನಂಜನಗೂಡು ಜುಬಿಲಿಯಂಟ್ ಕಾರ್ಖಾನೆ ನೌಕರ ಮಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ನೆಗಿಟಿವ್ ಆಗಿ ಇಂದು ಮನೆಗೆ ಹಿಂದಿರುಗಿದ್ದಾರೆ. ಕರೋನಾ ಗುಣಮುಖರಾದ ವ್ಯಕ್ತಿಗೆ ಕುಟುಂಬಸ್ಥರು ಆರತಿ ಬೆಳಗಿ ಚಪ್ಪಾಳೆ ತಟ್ಟಿ ಸ್ವಾಗತಿಸಿದರು.
ಈ ವೇಳೆ ಯುವಮುಖಂಡ ಎಂ.ಆರ್.ಮಂಜುನಾಥ್ ಬಡಾವಣೆಯ ಜನತೆಗೆ ಆತ್ಮವಿಶ್ವಾಸ ತುಂಬಿ ಆತಂಕ ಪಡದಿರುವಂತೆ ಧೈರ್ಯ ಹೇಳಿದರು. ಮುಖಂಡರಾದ ಶಿವರಾಮ ಉಪಸ್ಥಿತರಿದ್ದರು.