ಅನುಮಾನದ ಭೂತಕ್ಕೆ ಹೆಂಡ್ತಿ, ಮಗಳನ್ನು ಕೊಂದ

306

ಪ್ರಜಾಸ್ತ್ರ ಅಪರಾಧ ಸುದ್ದಿ

ಕಲಬುರಗಿ: ಪತ್ನಿಯ ಮೇಲಿನ ಅನುಮಾನದಿಂದ ಕಳೆದ ರಾತ್ರಿ ಸುಮಾರ 2.30ರ ಸಮಯದಲ್ಲಿ ಹೆಂಡ್ತಿ ಹಾಗೂ ಮಗಳನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಸೇಡಂ ಪಟ್ಟಣದ ವಿಶ್ವನಗರ ಬಡಾವಣೆಯಲ್ಲಿ ನಡೆದಿದೆ. ಜಗದೇಶ್ವರಿ(35) ಹಾಗೂ ಮಗಳು ಪ್ರಿಯಾಂಕಾ(11) ಕೊಲೆಯಾದ ದುರ್ದೈವಿಗಳು.

ಪಾಪಿ ದಿಗಂಬರ್ ಗಾಂಜಲಿ(47) ಪತ್ನಿ ಹಾಗೂ ಮಗಳನ್ನು ಕುಡಿದ ನಶೆಯಲ್ಲಿ ಕಟ್ಟಿಗೆಯಿಂದ ಭೀಕರವಾಗಿ ಹಲ್ಲೆ ಮಾಡಿ ಕೊಲೆ ಮಾಡಿದ್ದಾನೆ. ಘಟನೆಯಿಂದ ಕುಟುಂಬದಲ್ಲಿ ಕಣ್ಣೀರು ಕೋಡಿ ಹರಿಯುತ್ತಿದೆ. ಸೇಡಂ ಪೊಲೀಸರು ದಿಗಂಬರ್ ಗಾಂಜಲಿಯನ್ನು ಬಂಧಿಸಿದ್ದಾರೆ.

ಕಲಬುರಗಿಯಲ್ಲಿ ಪಾನಿಪುರಿ ವ್ಯಾಪಾರ ಮಾಡಿಕೊಂಡು ಈ ಕುಟುಂಬ ಜೀವನ ಮಾಡುತಿತ್ತು. ಕಳೆದ ಎರಡು ತಿಂಗಳ ಹಿಂದೆ ಕೆಲ ಕಾರಣಕ್ಕೆ ಸೇಡಂ ಬಂದು ಪಾನಿಪುರಿ ವ್ಯಾಪಾರ ಮಾಡಿಕೊಂಡಿದ್ದರು. ಆದರೆ, ಪತಿಗೆ ಪತ್ನಿಯ ಮೇಲೆ ಅನುಮಾನ. ಅಕ್ರಮ ಸಂಬಂಧ ಹೊಂದಿದ್ದಿಯಾ ಎಂದು ಜಗಳವಾಡುತ್ತಿದ್ದ. ಕಳೆದ ರಾತ್ರಿ ಕಂಠಪೂರ್ತಿ ಕುಡಿದು ಬಂದು ನೀಚ ಕೃತ್ಯವೆಸಗಿದ್ದಾನೆ.




Leave a Reply

Your email address will not be published. Required fields are marked *

error: Content is protected !!