ಸಿಂದಗಿ: ಬಸ್ಸಿನಡಿ ಸಿಲುಕಿದವನ ರಕ್ಷಣೆ

131

ಪ್ರಜಾಸ್ತ್ರ ಸುದ್ದಿ

ಸಿಂದಗಿ: ಪಟ್ಟಣದ ಹೊರವಲಯದಲ್ಲಿರುವ ಅರ್ಪಿತಾ ಡಾಬಾ ಹತ್ತಿರ ನಿಲ್ಲಿಸಿದ ಖಾಸಗಿ ಬಸ್ ಕೆಳಗೆ ಸಿಲುಕು ಹಾಕಿಕೊಂಡಿದ್ದ ವ್ಯಕ್ತಿಯನ್ನು, ಅಗ್ನಿಶಾಮಕ ಸಿಬ್ಬಂದಿ ಗುರುವಾರ ಸಂಜೆ ರಕ್ಷಿಸಿದ್ದಾರೆ.

ಆಲಮೇಲಕ್ಕೆ ಹೋಗುವ ರಸ್ತೆಯಲ್ಲಿರುವ ಅರ್ಪಿತಾ ಡಾಬಾ ಹತ್ತಿರ ನಿಂತಿದ್ದ ಖಾಸಗಿ ಬಸ್ ಕೆಳಗೆ ಕೆಲಸ ಮಾಡುತ್ತಿದ್ದಾಗ, ಬಸ್ಸಿನ ಗಾಲಿಯ ಏರ್ ಔಟ್ ಬಸ್ ಕುಸಿದಿದೆ. ಇದರಿಂದಾಗಿ ಕೆಲಸ ಮಾಡುತ್ತಿದ್ದ ತುರುಕುನಕೇರಿಯ ಮೂರ್ತಜಾ ಖಾದರಿ(30) ಎಂಬಾತ ಸಿಲುಕಿಕೊಂಡು ಜೀವನ್ಮರಣದ ಹೋರಾಟ ನಡೆಸಿದ್ದಾನೆ.

ಈ ಕುರಿತು ಅಗ್ನಿ ಶಾಮಕ ಸಿಬ್ಬಂದಿಗೆ ಮಾಹಿತಿ ನೀಡಿದಾಗ ಅವರು ಬಂದು ಆತನನ್ನು ರಕ್ಷಿಸಿದ್ದಾರೆ. ಅಗ್ನಿ ಶಾಮಕ ಸಿಬ್ಬಂದಿಯಾದ ಮಚೇಂದ್ರ, ಹನುಮಂತ.ವೈ, ಹಜರುದ್ದಿನ್ ಚಿತಗುಪ್ಪಿ, ಸಿದ್ದಣ್ಣ ರೊಡಗಿ, ಹನಮಂತ ಕುಂಬಾರ, ಶಾಂತಪ್ಪ ಬಿರಾದಾರ, ಕೃಷ್ಣಪ್ಪ ಪೂಜಾರಿ, ಶರಣು ಬಾಗೇವಾಡಿ ಈ ಕಾರ್ಯದಲ್ಲಿ ಭಾಗವಹಿಸಿದ್ದರು.




Leave a Reply

Your email address will not be published. Required fields are marked *

error: Content is protected !!