ಪ್ರಜಾಸ್ತ್ರ ಸುದ್ದಿ
ಮುಂಬೈ: ಇದೀಗ ಎಲ್ಲೆಡೆ ಕೋವಿಡ್ 19 2ನೇ ಅಲೆ ಶುರುವಾಗಿದೆ ಎಂದು ಹೇಳಲಾಗ್ತಿದೆ. ಹೀಗಾಗಿ ನಿಧಾನವಾಗಿ ಚೇತರಿಸಿಕೊಳ್ತಿದ್ದ ಜನಕ್ಕೆ ಈಗ ಮತ್ತೆ ತಲೆ ನೋವು ಶುರುವಾಗಿದೆ. ಜನರು ಮಾಸ್ಕ್ ಧರಿಸದಿದ್ರೆ ಲಾಕ್ ಡೌನ್ ಮಾಡುವುದು ಅನಿವಾರ್ಯವಾಗುತ್ತೆ ಎಂದು ಮಹಾರಾಷ್ಟ್ರ ಸಿಎಂ ಠಾಕ್ರೆ ಹೇಳಿದ್ದಾರೆ.
ಎಲ್ಲ ಕಡೆ ಏಕಕಾಲದಲ್ಲಿ ಲಾಕ್ ಡೌನ್ ಘೋಷಣೆ ಮಾಡುವುದಿಲ್ಲ. ಎಲ್ಲಿ ಅನಿವಾರ್ಯವಿದೆಯೋ ಅಲ್ಲಿ ಮಂಗಳವಾರ ಸಂಜೆಯಿಂದ ಲಾಕ್ ಡೌನ್ ಮಾಡಲಾಗುವುದು. ಆದ್ರೆ, ಅಭಿವೃದ್ಧಿ ಕಾಮಗಾರಿಗಳು ನಡೆಯಲಿವೆ ಎಂದು ಹೇಳಿದ್ದಾರೆ.
ಈಗಾಗ್ಲೇ ಮಹಾರಾಷ್ಟ್ರದಲ್ಲಿ ಬುಲ್ದಾನ, ಅಕೋಲಾ, ಯವತ್ಮಾಲ್, ಅಮ್ರಾವತಿ, ವಾಶೀಂ ಜಿಲ್ಲೆಗಳನ್ನ ಬಂದ್ ಮಾಡಲಾಗಿದೆ. ಕಳೆದ ವರ್ಷ ಕೋವಿಡ್ ಗೆ ಲಸಿಕೆ ಇರ್ಲಿಲ್ಲ. ಈಗ ಲಸಿಕೆ ಬಂದಿದ್ದು, ಜನರು ಆತಂಕಕ್ಕೆ ಒಳಗಾಗದೆ ಸ್ವಯಂ ಎಚ್ಚರಿಕೆಯಿಂದ ಇರುವುದು ಒಳ್ಳೆಯದು ಎಂದಿದ್ದಾರೆ.