ಬೆಂಗಳೂರು: ಕರೋನಾ ವಿರುದ್ಧದ ಹೋರಾಟಕ್ಕೆ ಅನೇಕರು ದೇಣಿಗೆ ನೀಡ್ತಿದ್ದಾರೆ. ಪ್ರಧಾನಿ ಮೋದಿ ಹಾಗೂ ಸಿಎಂ ಬಿಎಸ್ವೈ ಅವರು ದೇಣಿಗೆ ನೀಡುವಂತೆ ಕೋರಿಕೊಂಡಿದ್ರು. ಹೀಗಾಗಿ ಅನೇಕರು ಮುಂದೆ ಬಂದು ಹಣ ಸಹಾಯ ಮಾಡ್ತಿದ್ದಾರೆ. ಇಂದು ಸ್ವತಃ ಸಿಎಂ ಬಿ.ಎಸ್ ಯಡಿಯೂರಪ್ಪ ಸಿಎಂ ಪರಿಹಾರ ನಿಧಿಗೆ ತಮ್ಮ ದೇಣಿಗೆ ನೀಡಿದ್ದಾರೆ.
ಸಿಎಂ ಬಿಎಸ್ವೈ ತಮ್ಮ ಒಂದು ವರ್ಷದ ವೇತನವನ್ನ ಸಿಎಂ ಪರಿಹಾರ ನಿಧಿಗೆ ನೀಡಿದ್ದಾರೆ. ಇದರ ಜೊತೆಗೆ ಶಾಸಕರು, ಸಚಿವರು, ಸಂಸದರು, ಅಧಿಕಾರಿಗಳು ತಮ್ಮ ಕೈಲಾದ ಸಹಾಯ ಮಾಡುವಂತೆ ಮನವಿ ಮಾಡಿದ್ದಾರೆ. ನಿನ್ನೆಯಷ್ಟೇ ನಟ ಪುನೀತರಾಜಕುಮಾರ ಅವರು 50 ಲಕ್ಷ ರೂಪಾಯಿ ಚೆಕ್ ನೀಡಿದ್ರು.