ಕ್ರಿಕೆಟ್ ದುನಿಯಾದ ಖ್ಯಾತ ಬೌಲರ್, ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್ ಅನಿಲ ಕುಂಬ್ಳೆ ಅವರು ಕರೋನಾ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿದ್ದಾರೆ. ಪಿಎಂ ಹಾಗೂ ಸಿಎಂ ಪರಿಹಾರ ನಿಧಿಗೆ ತಮ್ಮ ಕೈಲಾದ ಸಹಾಯ ಮಾಡಿರುವುದಾಗಿ ತಿಳಿಸಿದ್ದಾರೆ.
ಈ ಬಗ್ಗೆ ಟ್ವಿಟ್ ಮಾಡಿರುವ ಕುಂಬ್ಳೆ, ಕರೋನಾ ವೈರಸ್ ನ್ನ ಔಟ್ ಮಾಡಬೇಕಿದೆ. ಇದಕ್ಕಾಗಿ ನನ್ನ ಕೈಲಾದ ಸಹಾಯವನ್ನ ಪಿಎಂ ಹಾಗೂ ಸಿಎಂ ಪರಿಹಾರ ನಿಧಿಗೆ ನೀಡಿದ್ದೇನೆ ಎಂದು ತಿಳಿಸಿದ್ದಾರೆ. ಎಷ್ಟು ಅನ್ನೋದು ತಿಳಿಸಿಲ್ಲ. ಇದರ ಜೊತೆಗೆ ಮನೆಯಲ್ಲಿಯೇ ಇರಿ ಸುರಕ್ಷಿತವಾಗಿರಿ ಎಂದು ಮನವಿ ಮಾಡಿಕೊಂಡಿದ್ದಾರೆ.