ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ರಾಜ್ಯ ಸರ್ಕಾರದ ಸಚಿವ ಸಂಪುಟ ನಾಳೆ ಸಂಜೆ 5ಗಂಟೆಗೆ ನಡೆಯಲಿದೆ ಅನ್ನೋದು ತಿಳಿದು ಬಂದಿದೆ. ಇದರ ನಡುವೆ ಡಿಸಿಎಂ ಆಕಾಂಕ್ಷಿಗಳಿಗೆ ಹೈಕಮಾಂಡ್ ಬಿಗ್ ಶಾಕ್ ನೀಡಿದೆ. ಅದೇನು ಅಂದ್ರೆ ಡಿಸಿಎಂ ಮಾಡದೆ ಇರಲು ನಿರ್ಧರಿಸಿದ್ದು, ಬರೀ ಸಚಿವರನ್ನ ಮಾತ್ರ ಮಾಡಲು ತೀರ್ಮಾನ ತೆಗೆದುಕೊಳ್ಳಲಾಗಿದೆ.
ಕೆ.ಎಸ್ ಈಶ್ವರಪ್ಪ, ಶ್ರೀರಾಮುಲು, ಆರ್.ಅಶೋಕ, ಅಶ್ವಥನಾರಾಯಣ, ಸಿ.ಟಿ ರವಿ ಸೇರಿದಂತೆ ಕೆಲವರು ಡಿಸಿಎಂ ರೇಸಿನಲ್ಲಿದ್ದರು. ಆದ್ರೆ, ಅವರಿಗೆಲ್ಲ ಹೈಕಮಾಂಡ್ ಶಾಕ್ ನೀಡಿದೆ. ಹೀಗಾಗಿ ಉಪಮುಖ್ಯಮಂತ್ರಿ ಕನಸು ಕಾಣುತ್ತಿದ್ದವರ ಕನಸಿಗೆ ತಣ್ಣೀರು ಎರಚಿದ್ದಂತಾಗಿದೆ.