ಪ್ರಜಾಸ್ತ್ರ ಸುದ್ದಿ
ಮಂಗಳೂರು: ಕೋವಿಡ್ 19 ಸೋಂಕಿನಿಂದ ಮೃತಪಟ್ಟ ವ್ಯಕ್ತಿಯ ಅಂತ್ಯಸಂಸ್ಕಾರ ಮಾಡುವ ಕೊನೆ ಟೈಂನಲ್ಲಿ ವಿಚಿತ್ರ ಘಟನೆ ನಡೆದಿದೆ. ಮೃತಪಟ್ಟ ವ್ಯಕ್ತಿಯೇ ಬೇರೆಯಾಗಿದ್ದು, ಊರಿಗೆ ತೆಗೆದುಕೊಂಡು ಬಂದ ಶವವೇ ಮತ್ತೊಂದು ಆಗಿದೆ. ಇದ್ರಿಂದಾಗಿ ಮೃತನ ಸಂಬಂಧಿಕರು ಗಲಾಟೆ ಮಾಡಿದ ಘಟನೆ ಕುಂದಾಪುರದಲ್ಲಿ ನಡೆದಿದೆ.
65 ವರ್ಷದ ವೃದ್ಧರೊಬ್ಬರು ಕರೋನಾ ಸೋಂಕಿನಿಂದ ಮಣಿಪಾಲ್ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ರು. ಕೋವಿಡ್ ನಿಂದ ಸಾವಾಗಿದ್ದ ಕಾರಣಕ್ಕೆ ದೇಹವನ್ನ ಪ್ಯಾಕ್ ಮಾಡಿಕೊಡಲಾಗಿತ್ತು. ಹೀಗಾಗಿ ಆಂಬ್ಯುಲೆನ್ಸ್ ಮೂಲಕ ಕುಂದಾಪುರದ ಹಳೇಕೋಟೆ ಸ್ಮಶಾನಕ್ಕೆ ತೆಗೆದುಕೊಂಡು ಬರಲಾಗಿದೆ. ಅಲ್ಲಿ ಪ್ಯಾಕ್ ಬಿಚ್ಚಿ ನೋಡಿದ್ರೆ ಶವವೇ ಬೇರೆಯಾಗಿದೆ.
ಈ ವಿಚತ್ರ ಘಟನೆಯಿಂದ ಮೃತನ ಸಂಬಂಧಿಕರು ಆಂಬ್ಯುಲೆನ್ಸ್ ಚಾಲಕನ ಜೊತೆ ಜಗಳ ಮಾಡಲು ಶುರು ಮಾಡಿದ್ದಾರೆ. ಬಳಿಕ ಸ್ಥಳಕ್ಕೆ ಬಂದ ಪೊಲೀಸ್ರು ಪರಿಸ್ಥಿತಿಯನ್ನ ನಿಯಂತ್ರಿಸಿದ್ದಾರೆ.