ಕರೋನಾ ಸೋಂಕಿತರ ಗುರುತಿಗೆ ‘ಮಹಾ’ ಸರ್ಕಾರದ ಹೊಸ ಐಡಿಯಾ

482

ಮುಂಬೈ: ದೇಶದಲ್ಲಿ ಕರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗಿರುವುದು ನೆರೆಯ ಮಹಾರಾಷ್ಟ್ರದಲ್ಲಿ. ಅಲ್ದೇ, ದಿನದಿಂದ ದಿನಕ್ಕೆ ಇಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗ್ತಿದೆ. ಹೀಗಾಗಿ ಸೋಂಕಿತರ ಗುರುತಿಗಾಗಿ ಅವರ ಕೈ ಮೇಲೆ ಮುದ್ರೆಯನ್ನ ಒತ್ತಲಾಗ್ತಿದೆ.

ಸೋಂಕಿತರನ್ನ ಗೃಹಬಂಧನದಲ್ಲಿಟ್ಟು ಅವರ ಎಡಗೈಗೆ ಚಿಕಿತ್ಸೆ ದಿನಾಂಕ ನಮೂದಿಸಲಾಗ್ತಿದೆ. ಈ ಮೂಲಕ ಅವರಿಗೆ ನೀಡಬೇಕಾದ ಚಿಕಿತ್ಸೆ ವಿಧಾನ ತಿಳಿಯಲಿದೆ ಎನ್ನಲಾಗ್ತಿದೆ. ಈ ಬಗ್ಗೆ ಮಾಹಿತಿ ನೀಡಿರುವ ಆರೋಗ್ಯ ಸಚಿವ ರಾಜೇಶ ತೋಪೆ, ಕರೋನಾ ಸೋಂಕಿತರ ಮೇಲೆ ತಿವ್ರ ನಿಗಾ ವಹಿಸಲಾಗಿದೆ. ಅವರ ಎಡಗೈ ಮೇಲೆ ದಿನಾಂಕದ ಮುದ್ರೆ ಒತ್ತಲಾಗಿದೆ ಎಂದು ತಿಳಿಸಿದ್ದಾರೆ.

ಕೈಗೆ ಮುದ್ರೆ ಒತ್ತುವ ಕ್ರಮದ ಬಗ್ಗೆ ಸಿಎಂ ಉದ್ಭವ್ ಠಾಕ್ರೆ ಸಹ ಸ್ಪಷ್ಟಪಡಿಸಿದ್ದು, ಕರೋನಾ ಪೀಡಿತರ ಗುರುತಿಸುವಿಕೆ ಹಾಗೂ ಅವರ ಚಿಕಿತ್ಸೆ ನೀಡುವ ಹೊಣೆ ನಮ್ಮ ಸರ್ಕಾರದ ಮೇಲಿದೆ ಎಂದಿದ್ದಾರೆ. ಇದಕ್ಕೆ ಮಹಾರಾಷ್ಟ್ರದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.




Leave a Reply

Your email address will not be published. Required fields are marked *

error: Content is protected !!