ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರ ಮಾಜಿ ಸಿಎಂಗಳಿಬ್ಬರಿಗೆ ನೀಡಿದ್ದ ಭದ್ರತೆಯನ್ನ ವಾಪಸ್ ಪಡೆಯಲಾಗಿದೆ. ಪೈಲಾಟ್ ವಾಹನ ಭದ್ರತೆಯನ್ನ ಹಿಂಪಡೆದಿರುವ ಸಿಎಂ ಬಿಎಸ್ವೈ ಸರ್ಕಾರ, ಎಸ್ಕಾರ್ಟ್ ಮಾತ್ರ ಮುಂದುವರೆಸಿದೆ.
ಇತ್ತೀಚೆಗಷ್ಟೇ ಮಾಜಿ ಸಿಎಂ ಸಿದ್ದರಾಮಯ್ಯ ತಮ್ಗೆ ಝಡ್ ಪ್ಲಸ್ ಭದ್ರತೆ ನೀಡಬೇಕೆಂದು ಕೇಳಿಕೊಂಡಿದ್ರು. ಆದ್ರೆ, ಇದೀಗ ಇರೋ ಭದ್ರತೆಯನ್ನ ಸಹ ಹಿಂಪಡೆದು ಬರೀ ಎಸ್ಕಾರ್ಟ್ ಸೇವೆ ನೀಡಲಾಗಿದೆ. ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, ಯಾವ ಕಾರಣಕ್ಕೆ ಭದ್ರತೆ ವಾಪಸ್ ಪಡೆಯಲಾಗಿದೆ. ಈ ಬಗ್ಗೆ ಗೃಹ ಸಚಿವರಾಗ್ಲಿ, ಪೊಲೀಸ್ ಆಯುಕ್ತರಾಗ್ಲಿ ಯಾವುದೇ ಮಾಹಿತಿ ನೀಡುತ್ತಿಲ್ಲವೆಂದು ಕಿಡಿ ಕಾರಿದ್ದಾರೆ.
ಮೊದ್ಲಿದ್ದ ಝಡ್ ಪ್ಲಸ್ ಭದ್ರತೆಯನ್ನ, ಝಡ್ ಗೆ ಇಳಿಸಲಾಯ್ತು. ಇದೀಗ ಝಡ್ ಶ್ರೇಣಿ ಭದ್ರತೆಯೂ ಹಿಂಪಡೆದು ಬರೀ ಎಸ್ಕಾರ್ಟ್ ಉಳಿಸಿದ್ದಾರೆ. ಇನ್ನೋವಾ ಕ್ರಿಸ್ಟಾ ವಾಹನ ವಾಪಸ್ ಪಡೆದು 2.61 ಲಕ್ಷ ಕಿಲೋ ಮೀಟರ್ ಓಡಿರುವ ಸ್ಕಾರ್ಪಿಯೋ ನೀಡಲಾಗಿದೆ. ಅದು ಎಲ್ಲೆಂದರಲ್ಲಿ ಕೆಟ್ಟು ನಿಲ್ಲುತ್ತೆ ಎಂದು ಹೆಚ್ಡಿಕೆ ವಾಗ್ದಾಳಿ ನಡೆಸಿದ್ದಾರೆ.
ಭದ್ರತೆಯ ದೃಷ್ಟಿಯಿಂದ ವಿವಿಐಪಿಗಳ ಪಟ್ಟಿಯಲ್ಲಿರುವ ಮಾಜಿ ಸಿಎಂಗಳಿಗೆ, ವಿಪಕ್ಷ ನಾಯಕರಿಗೆ ಪೈಲೆಟ್ ವಾಹನ ಹಾಗೂ ಎಸ್ಕಾರ್ಟ್ ಸೇವೆ ನೀಡಲಾಗುತ್ತೆ. ಆದ್ರೆ, ಇದೀಗ ಬರೀ ಎಸ್ಕಾರ್ಟ್ ಸೇವೆ ಮಾತ್ರ ಒದಗಿಸಲಾಗಿದೆ.