ಪ್ರಜಾಸ್ತ್ರ ಸುದ್ದಿ
ಚಿತ್ರದುರ್ಗ: ಚಾಲಕನ ನಿಯಂತ್ರಣ ತಪ್ಪಿ ಕುರಿಗಾಯಿ ಹಾಗೂ ಕುರಿಗಳ ಮೇಲೆ ಲಾರಿ ಹರಿದ ಘಟನೆ ಜಿಲ್ಲೆಯ ಹೊಳಲ್ಕೆರೆ ಹತ್ತಿರ ನಡೆದಿದೆ. ಇದರಲ್ಲಿ ಕುರಿಗಾಯಿ ಸೇರಿ ಬರೋಬ್ಬರಿ 70 ಕುರಿಗಳು ಮೃತಪಟ್ಟಿವೆ ಎಂದು ಹೇಳಲಾಗುತ್ತಿದೆ.
ಹೊಳಲ್ಕೆರೆ ತಾಲೂಕಿನ ಕುಡಿನೀರಿನಕಟ್ಟೆ ಸಮೀಪ ಹಿರಿಯೂರು ತಾಲೂಕು ಬೆನಕನಹಳ್ಳಿಯ ಮೂಡ್ಲಪ್ಪ ಹಾಗೂ ಇತರರು ಕುರಿಗಳನ್ನು ಹೊಡೆದುಕೊಂಡು ಹೊರಟಿದ್ದಾಗ ಈ ಘಟನೆ ನಡೆದಿದೆ. ಘಟನೆ ಬಳಿಕ ಲಾರಿ ಚಾಲಕ ಪರಾರಿಯಾಗಿದ್ದಾನೆ. ಘಟನಾ ಸ್ಥಳಕ್ಕೆ ಸಿಪಿಐ ರವೀಶ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.