ಪ್ರಜಾಸ್ತ್ರ ಸುದ್ದಿ
ವಿಜಯಪುರ: ಜಿಲ್ಲೆಯ ನೂತನ ತಾಲೂಕು ಆಲಮೇಲದ ಕಡಣಿ ಗ್ರಾಮದಲ್ಲಿರುವ ಕಬ್ಬಿನ ಗದ್ದೆಯೊಂದರಲ್ಲಿ ವಿದ್ಯುತ್ ಸ್ಪರ್ಶದಿಂದಾಗಿ ಬೆಂಕಿ ಹೊತ್ತಿಕೊಂಡ ಪರಿಣಾಮ ಅಪಾರ ಪ್ರಮಾಣದಲ್ಲಿ ಬೆಳೆ ನಷ್ಟವಾಗಿದೆ. ಕಡಣಿ ಗ್ರಾಮದ ರೈತರ ಪ್ರೇಮಾನಂದ ಗುಗ್ಗವಾಡ ಎಂಬುವರ ಕಬ್ಬಿನ ಹೊಲದಲ್ಲಿ ಈ ಅನಾಹುತ ಸಂಭವಿಸಿದೆ.
ಕಬ್ಬಿಗೆ ಬೆಂಕಿ ಬಿದ್ದಿರುವ ಕುರಿತು ಸಿಂದಗಿಯ ಅಗ್ನಿ ಶಾಮಕ ಠಾಣೆಗೆ ಮಾಹಿತಿ ನೀಡಲಾಗಿದೆ. ತಕ್ಷಣ ಕಾರ್ಯಪ್ರವೃತ್ತರಾದ ಸಿಬ್ಬಂದಿ ಸ್ಥಳಕ್ಕೆ ತೆರಳಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದೆ. ಬೆಂಕಿ ನಂದಿಸುವ ಕಾರ್ಯದಲ್ಲಿ ಅಗ್ನಿ ಶಾಮಕ ಠಾಣೆಯ ಸಿಬ್ಬಂದಿಯಾದ ಮಚೇಂದ್ರ ಶಿಂಧೆ, ರವಿ ನಾಯಕ, ಶಾಂತಪ್ಪ ಬಿರಾದಾರ, ಅಶೋಕ ರಾಠೋಡ ಹಾಗೂ ಮಾಂತೇಶ್ ಜಾಲಿಹಾಳ ಭಾಗಹಿಸಿದ್ದರು.