ಕಣಿವೆ ನಾಡಿನಲ್ಲಿ ಕರೋನಾಗೆ ಮೊದಲ ಬಲಿ

329

ಶ್ರೀನಗರ: ಕರೋನಾ ವೈರಸ್ ನಿಂದಾಗಿ ಇಡೀ ದೇಶವೇ ತಲ್ಲಣಿಸಿದೆ. ಹೀಗಾಗಿ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹಾಗೂ ಸಾವಿನ ಸಂಖ್ಯೆ ಏರುತ್ತಲೇ ಇದೆ. ಇಂದು ಕಣಿವೆ ನಾಡಿನಲ್ಲಿ ಕರೋನಾಗೆ ಮೊದಲ ಬಲಿಯಾಗಿದೆ.

ಜಮ್ಮು ಕಾಶ್ಮೀರದಲ್ಲಿ 65 ವರ್ಷದ ವ್ಯಕ್ತಿಗೆ ಮಹಾಮಾರಿಗೆ ಬಲಿಯಾಗಿದ್ದಾರೆ. ಧಾರ್ಮಿಕ ಬೋಧಕರಾಗಿ ಕೆಲಸ ಮಾಡ್ತಿದ್ದ ವ್ಯಕ್ತಿ ಮೃತಪಟ್ಟಿದ್ದಾರೆ. ಇವರು ಸೋಂಕಿಗೆ ತುತ್ತಾಗುವ ಮೊದ್ಲು ದೆಹಲಿ, ಉತ್ತರ ಪ್ರದೇಶ ಹಾಗೂ ಶ್ರೀನಗರದಲ್ಲಿ ಪ್ರಯಾಣ ನಡೆಸಿದ್ರು ಅನ್ನೋದು ತಿಳಿದು ಬಂದಿದೆ. ಅಲ್ದೇ ಈ ವ್ಯಕ್ತಿಯೊಂದಿಗೆ ಸಂಪರ್ಕ ಹೊಂದಿದ್ದ ನಾಲ್ವರಲ್ಲಿಯೂ ಸೋಂಕು ಕಾಣಿಸಿಕೊಂಡಿದೆ ಅನ್ನೋದು ತಿಳಿದು ಬಂದಿದೆ.




Leave a Reply

Your email address will not be published. Required fields are marked *

error: Content is protected !!