ಸ್ವಾಗತ ಭಾಷಣಕ್ಕೆ ಸಿಎಂ ಬೊಮ್ಮಾಯಿ ಗರಂ

666

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಸರ್.ಎಂ ವಿಶ್ವವೇಶ್ವರಯ್ಯನವರ 161ನೇ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಗರಂ ಆದರು. ಇದಕ್ಕೆ ಕಾರಣವಾಗಿದ್ದು ಸ್ವಾಗತ ಭಾಷಣ. ಸ್ವಾಗತ ಭಾಷಣದ ಸಂದರ್ಭದಲ್ಲಿ ಅನಗತ್ಯವಾಗಿ 10 ನಿಮಿಷಗಳ ಕಾಲ ಮಾತನಾಡಲಾಗಿದೆ. ಇದರಿಂದ ಸಿಟ್ಟಾದ ಸಿಎಂ, ಸಮಯಕ್ಕೆ ಮಹತ್ವ ಕೊಡಬೇಕು ಎಂದು ಆಯೋಜಕರ ವಿರುದ್ಧ ಹಾರಿಹಾಯ್ದರು.

ವಿಶ್ವವೇಶ್ವರಯ್ಯನವರು ಶ್ರಮಜೀವಿಗಳು. ಸಮಯಕ್ಕೆ ಮಹತ್ವ ಕೊಡುತ್ತಿದ್ದರು. ಅವರ ಸಾಧನೆಯಿಂದಾಗಿ 161 ವರ್ಷಗಳು ಕಳೆದರೂ ಅವರನ್ನು ನೆನಪು ಮಾಡಿಕೊಳ್ಳುತ್ತೇವೆ. ಸ್ವಂತ ಮನೆ ಕಟ್ಟುವಾಗಿ ನೋಡುವ ಗುಣಮಟ್ಟ ಸರ್ಕಾರಿ ಕೆಲಸದಲ್ಲಿಯೂ ನೋಡಬೇಕು ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಇದಾದ ಮೇಲೆ ಕೆ.ಆರ್ ವೃತ್ತದಲ್ಲಿರುವ ಸರ್.ಎಂ ವಿಶ್ವವೇಶ್ವರಯ್ಯನವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಈ ವೇಳೆ ಬಿಬಿಎಂಪಿ ವತಿಯಿಂದ ನಿರ್ಮಿಸಲಾಗಿರುವ 160 ಅಡಿ ಎತ್ತರದ ಕಾರಂಜಿಯನ್ನು ಉದ್ಘಾಟಿಸಿದರು.




Leave a Reply

Your email address will not be published. Required fields are marked *

error: Content is protected !!