ಅತ್ತ ರಾಮನ ಜಪ.. ಇತ್ತ ದೇವಸ್ಥಾನಗಳ ನೆಲಸಮ: ಸಿದ್ದರಾಮಯ್ಯ

216

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ದೇವಸ್ಥಾನಗಳ ತೆರವು ಕಾರ್ಯಾಚರಣೆ ವಿಚಾರ ಇದೀಗ ಬಹುದೊಡ್ಡ ಚರ್ಚೆಯ ವಿಷಯವಾಗಿದೆ. ಹಿಂದುತ್ವದ ಅಝೆಂಡಾ ಇಟ್ಟುಕೊಂಡು ಚುನಾವಣೆ ನಡೆಸುವ ಬಿಜೆಪಿ ಸರ್ಕಾರದ ವಿರುದ್ಧ ವಿಪಕ್ಷಗಳು ಮುಗಿಬಿದ್ದಿದ್ದು, ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ಬಿಜೆಪಿಯವರದ್ದು ಡೋಂಗಿ ಹಿಂದುತ್ವ. ಬಿಜೆಪಿ ನಾಯಕರು ರಾಮನ ಜಪ ಮಾಡುತ್ತಾ ದೇವಸ್ಥಾನಗಳನ್ನು ಒಡೆದು ಹಾಕುತ್ತಿದ್ದಾರೆ. ಹಿಂದುತ್ವದ ಬಗ್ಗೆ ಹೇಳುವ ಬಿಜೆಪಿ ಸರ್ಕಾರವೇ ದೇವಸ್ಥಾನಗಳನ್ನು ಕೆಡವುತ್ತಿದೆ. ಜನರ ಜೊತೆ, ಭಕ್ತರ ಜೊತೆಗೆ ಚರ್ಚಿಸದೆ, ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳದೆ ಮನಸ್ಸಿಗೆ ಬಂದಂತೆ ಮಾಡುತ್ತಿದೆ. ಕೇವಲ ವೋಟಿಗಾಗಿ, ರಾಜಕಾರಣಕ್ಕಾಗಿ ಹಿಂದುತ್ವ ಎಂದು ಬಿಜೆಪಿಗರು ಹೇಳುತ್ತಾರೆ ಎಂದು ಕಿಡಿ ಕಾರಿದ್ದಾರೆ.




Leave a Reply

Your email address will not be published. Required fields are marked *

error: Content is protected !!