ಕರುನಾಡಿಗೆ ಕರೋನಾ ಕಾರ್ಮೋಡ…

449

ಬೆಂಗಳೂರು: ಕರುನಾಡಿನಲ್ಲಿ ಕರೋನಾ ವೈರಸ್ ಸೋಂಕಿನ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಹೀಗಾಗಿ ರಾಜ್ಯದ ಜನರಲ್ಲಿ ಸಾಕಷ್ಟು ಭೀತಿ ಮೂಡಿದೆ. ಹೀಗಾಗಿ ರಾಜ್ಯದಲ್ಲಿ ಇನ್ನೊಂದು ವಾರ ಬಂದ್ ಮುಂದುವರಿಕೆ ಮಾಡಲಾಗುವುದು ಎಂದು ಸಿಎಂ ಬಿ.ಎಸ್ ಯಡಿಯೂರಪ್ಪ ಹೇಳಿದ್ದಾರೆ.

ಮಾಧ್ಯಮದವರೊಂದಿಗೆ ಮಾತ್ನಾಡಿದ ಸಿಎಂ, ಮಧ್ಯಾಹ್ನ ಸಚಿವ ಸಂಪುಟ ನಡೆಸಿ, ಕರ್ನಾಟಕವನ್ನ ಇನ್ನೊಂದು ವಾರ ಬಂದ್ ಮಾಡುವ ಕುರಿತು ತೀರ್ಮಾನಿಸಿ ಘೋಷಣೆ ಮಾಡಲಾಗುವುದು ಎಂದಿದ್ದಾರೆ. ಸೋಂಕು ದಿನದಿಂದ ದಿನಕ್ಕೆ ಒಂದಿಷ್ಟು ಹೆಚ್ಚಾಗ್ತಿದ್ದು, ಹೀಗಾಗಿ ಇನ್ನೊಂದು ವಾರ ಬಂದ್ ಮುಂದುವರಿಸಲಾಗುವುದು ಅಂತಾ ಹೇಳಲಾಗ್ತಿದೆ.

ಈಗಾಗ್ಲೇ ಒಂದು ವಾರ ಕಾಲೇಜುಗಳಿಗೆ ರಜೆ ನೀಡಲಾಗಿದೆ. ಶಾಲಾ ಮಕ್ಕಳ ಪರೀಕ್ಷೆಗಳನ್ನ ಮುಂದೂಡಲಾಗಿದೆ. ಅಗತ್ಯಕ್ಕಿಂತ ಹೆಚ್ಚಿನ ಜನರು ಸೇರುವುದು ನಿರ್ಬಂಧಿಸಲಾಗಿದೆ. ಹೀಗಾಗಿ ಬಹುತೇಕ ವ್ಯಾಪಾರ ವಹಿವಾಟ ಸ್ತಬ್ಧವಾಗಿದೆ. ಇನ್ನೂ ಕರೋನಾ ಕಂಟ್ರೋಲ್ ಗೆ ಬರದರೆಯಿರುವ ಕಾರಣ ಮತ್ತೊಂದು ಕರ್ನಾಟಕ ಬಂದ್ ಮುಂದುವರೆಸುವ ಸಾಧ್ಯತೆಯಿದೆ.

ಓದುಗರ ಗಮನಕ್ಕೆ



Leave a Reply

Your email address will not be published. Required fields are marked *

error: Content is protected !!