ಮಂಡ್ಯ: ಜಿಲ್ಲೆಯ ಬಸರಾಲು ಹೋಬಳಿ ಪಟ್ಟಣದ ಜನರಲ್ಲಿ ಕರೋನಾ ವೈರಸ್ ಗಂಭೀರತೆ ಇನ್ನೂ ಅರ್ಥವಾಗಿಲ್ಲ. ಇಂದಿನಿಂದ ಮಾರ್ಚ್ 31ರ ತನಕ ಕರ್ನಾಟಕ ಲಾಕ್ ಡೌನ್ ಘೋಷಿಸಿದ್ರೂ, ರಾಜಾರೋಷಾಗಿ ತಿರುಗಾಡಿದ್ದಾರೆ. ವ್ಯಾಪಾರ ವಹಿವಾಟು ಮಾಡಿದ್ದಾರೆ.
ಪಟ್ಟಣದಲ್ಲಿಂದು ಪೊಲೀಸರು ಗಸ್ತು ತಿರುಗಿ ಮನೆಯಿಂದ ಹೊರಗೆ ಬರಬೇಡಿ ಎಂದು ಮೈಕ್ ನಲ್ಲಿ ಅನೌನ್ಸ್ ಮಾಡಿದ್ದಾರೆ. 144 ಸೆಕ್ಷನ್ ಜಾರಿಯಲ್ಲಿದೆ. ಆದ್ರೂ ಜನರ ಓಡಾಟ ಎಂದಿನಂತೆ ಕಂಡು ಬಂದಿದೆ. ಅಂಗಡಿ ಮುಂಗಟ್ಟುಗಳು ತೆರೆದಿದ್ವು.
ಪೊಲೀಸ್ರು, ಆರೋಗ್ಯ ಇಲಾಖೆ ಸಿಬ್ಬಂದಿ ಜನರಲ್ಲಿ ಜಾಗೃತಿ ಮೂಡಿಸ್ತಿದ್ರೂ ಸಾರ್ವಜನಿಕರು ಅದನ್ನ ಅರ್ಥ ಮಾಡಿಕೊಳ್ಳದೆ ವರ್ತಿಸ್ತಿದ್ದು ಮಾತ್ರ ದುರಂತ. ಇವರನ್ನ ಹೀಗೆ ಬಿಡುವ ಬದ್ಲು ಇಂತವರ ವಿರುದ್ಧ ಕಠಿಣ ಕ್ರಮಗಳನ್ನ ತೆಗೆದುಕೊಳ್ಳಬೇಕಿದೆ.