ತಬ್ಲೀಗ್ ಜಮಾತ್ ದಿಂದ ‘ಕರೋನಾ ಜಿಹಾದ್’: ಮುತಾಲಿಕ್

438

ಧಾರವಾಡ: ದೆಹಲಿಯಲ್ಲಿ ನಡೆದ ತಬ್ಲೀಗ್ ಜಮಾತ್‌ ದಿಂದಲೇ ದೇಶದಲ್ಲಿ ಕರೋನಾ ಸೋಂಕು ಹೆಚ್ಚಿದೆ. ಈ ಧಾರ್ಮಿಕ ಸಭೆಯಿಂದ ದೇಶ ಹಾಗೂ ರಾಜ್ಯದ ಕರೋನಾ ಹೆಚ್ಚಾಗಿದೆ ಎಂದು ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ್ ಆರೋಪಿಸಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಬ್ಲೀಗ್ ಧಾರ್ಮಿಕ ಸಭೆಯಿಂದ ಕರೊನಾ ಡಬಲ್ ಆಗಿದೆ. ಅವರನ್ನೇನು ಬಂಧಿಸುತ್ತಿಲ್ಲ. ಜೈಲಿಗೆ ಹಾಕುತ್ತಿಲ್ಲ. ಚಿಕಿತ್ಸೆಗೆ ಆಹ್ವಾನಿಸಿದ ಆಶಾ-ಅಂಗನವಾಡಿ ಕಾರ್ಯಕರ್ತೆ ಹಾಗೂ ಪೊಲೀಸರ ಮೇಲೂ ಹಲ್ಲೆ ಮಾಡುವುದು ಸರಿಯಲ್ಲ. ಇನ್ನೂ ದೇಶದಲ್ಲಿ 500 ಜನ ತಬ್ಲೀಗ್ ಗಳು ಬೇರೆ ಕಡೆಗಳಲ್ಲಿ ತಲೆಮರೆಸಿಕೊಂಡಿದ್ದಾರೆ ಎಂದು ಗಭೀರವಾಗಿ ಆರೋಪಿಸಿದ್ದಾರೆ.

ಕರೋನಾ ಜಿಹಾದ್

ಸರ್ಕಾರ ಮೌಲ್ವಿ ಕಡೆಯಿಂದ ಹೇಳಿಸಿದರೂ, ಮುಸ್ಲಿಂ ಜನಪ್ರತಿನಿಧಿಗಳಿಂದ ಹೇಳಿಸಿದರೂ, ಏನೂ ಪ್ರಯೋಜನವಾಗಿಲ್ಲ. ಸರ್ಕಾರ ಕೇಸ್ ಹಾಕುತ್ತೇವೆ ಎಂದರೂ ಹೊರಗಡೆ ಬರುತ್ತಿಲ್ಲ. ತಬ್ಲೀಗ್ ಜಮಾತ್ ಉದ್ದೇಶವೇ ‘ಕರೋನಾ ಜಿಹಾದ್’. ದೇಶದಲ್ಲಿ ಬಾಂಬ್ ಹಾಕಿ ಹೇಗೆ ಹಿಂದೂ ಜನರನ್ನ ಕೊಲ್ಲುತ್ತಿದ್ದರೋ, ಹಾಗೇ ಇಂದು ಕರೋನಾ ಮೂಲಕ ಆತ್ಮಾಹುತಿ ದಾಳಿ ಮಾಡುವ ಪ್ರಕ್ರಿಯೆ ನಡೆದಿದೆ ಎಂದು ಆರೋಪಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!