ಹುಬ್ಬಳ್ಳಿಯಲ್ಲಿ ವಾರದ ಸಂತೆಗೂ ಬಿತ್ತು ಕತ್ತರಿ

303

ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಸಂತೆಗೆ ಬ್ರೇಕ್ ಹಾಕಲಾಗಿದೆ. ಈ ಮೂಲಕ ಜನಸಾಮಾನ್ಯರು ದಿನಿಬಳಕೆ ವಸ್ತುಗಳ ಖರೀದಿಗೂ ಪರದಾಡ್ತಿದ್ದಾರೆ. ಕರೋನಾ ವೈರಸ್ ನಿಂದಾಗಿ ಜಿಲ್ಲಾಡಳಿತದ ಆದೇಶದ ಮೇರೆಗೆ ಸಂತೆಗೆ ಪೊಲೀಸ್ರು ಬ್ರೇಕ್ ಹಾಕಿದ್ದಾರೆ. ಇದರ ಪರಿಣಾಮ ಜನರು ಸಂಕಷ್ಟಕ್ಕೆ ತುತ್ತಾಗಿದ್ದಾರೆ.

ನಗರದ ಅಶೋಕನಗರದಲ್ಲಿ ಬುಧವಾರ ನಡೆಯುವ ವಾರದ ಸಂತೆಗೆ ಬ್ರೇಕ್ ಬಿದ್ದಿದೆ. ಈ ವೇಳೆ ಪೊಲೀಸ್ರು ಹಾಗೂ ವ್ಯಾಪಾರಸ್ಥರ ನಡುವೆ ವಾಗ್ವಾದ ನಡೆದಿದೆ. ಇದರ ಪರಿಣಾಮ ಪೊಲೀಸ್ರು ಸ್ಥಳದಲ್ಲಿಯೇ ಮುಕ್ಕಾಂ ಹೂಡಿದ್ದಾರೆ. ಮಾರ್ಚ್ 21ರ ತನಕ ಜಿಲ್ಲಾಡಳಿತ ಸೆಕ್ಷನ್ 144 ಜಾರಿ ಮಾಡಿದ್ದು, ಇದನ್ನ ಧಿಕ್ಕರಿಸಿ ಸಂತೆ ನಡೆಸಿದ್ದ ವ್ಯಾಪಾರಕ್ಕೆ ಇದೀಗ ಬ್ರೇಕ್ ಬಿದ್ದಿದೆ.




Leave a Reply

Your email address will not be published. Required fields are marked *

error: Content is protected !!