ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಮಧ್ಯಾಹ್ನದ ಕರೋನಾ ಹೆಲ್ತ್ ಬುಲೆಟಿನ್ ಬಂದಿದ್ದು, 122 ಜನರಲ್ಲಿ ಕರೋನಾ ಸೋಂಕು ದೃಢಪಟ್ಟಿದೆ. ಈ ಮೂಲಕ ಮತ್ತೆ ನೂರರ ಗಡಿ ದಾಟಿಕೊಂಡು ಹೊರಟಿದೆ. ಇದರಿಂದಾಗಿ ರಾಜ್ಯದಲ್ಲಿ 2,405ಕ್ಕೆ ಸೋಂಕಿತರ ಸಂಖ್ಯೆ ಏರಿಕೆಯಾಗಿದೆ.
ಕಲಬುರಗಿ 28, ಯಾದಗಿರಿ 16, ಹಾಸನ 15, ಬೀದರ12, ದಕ್ಷಿಣ ಕನ್ನಡ 11, ಉಡುಪಿ 9, ಉತ್ತರ ಕನ್ನಡ 6, ರಾಯಚೂರು 5, ಬೆಳಗಾವಿ 4, ಬೆಂ.ನ 4, ಚಿಕ್ಕಮಗಳೂರು 3, ಬೆಂ.ಗ್ರಾಮೀಣ 2, ವಿಜಯಪುರ 2, ಮಂಡ್ಯ 1, ತುಮಕೂರು 1 ಹಾಗೂ ಬಳ್ಳಾರಿಯಲ್ಲಿ 1 ಸೋಂಕು ಪ್ರಕರಣ ಪತ್ತೆಯಾಗಿದೆ.
ಇನ್ನು ರಾಜ್ಯದಲ್ಲಿ ಇಂದು 14 ಜನ ಬಿಡುಯಾಗುವ ಮೂಲಕ ಇದುವರೆಗೂ 762 ಜನ ಬಿಡುಗಡೆಯಾಗಿದ್ದಾರೆ. 45 ಜನ ಸಾವನ್ನಪ್ಪಿದ್ದಾರೆ.