ಪ್ರಜಾಸ್ತ್ರ ಸುದ್ದಿ
ದೊಡ್ಡಸ್ತಿಕೆಗಾಗಿ ವಿದೇಶಗಳಿಗೆ ಲಸಿಕೆ ರಫ್ತು ಮಾಡಿ, ದೇಶದ ಜನತೆಯನ್ನ ನರಳುವಂತೆ ಮಾಡಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಸೋಂಕಿನಿಂದ ಬಳಲು ಜನರಿಗೆ ಆರ್ಥಿಕ ಶಕ್ತಿ ತುಂಬುವ ಬದಲು ಪ್ರಧಾನಿ ಭಾಷಣ ಪ್ರವಚನದಂತಿತ್ತು ಎಂದು ಹೇಳಿದ್ದಾರೆ.
ರಾಜ್ಯ ಸರ್ಕಾರಕ್ಕೆ ಜನರಿಗೆ ಮುಖ ತೋರಿಸುವ ನೈತಿಕತೆಯಿಲ್ಲ. ಹೀಗಾಗಿ ಸರ್ವಪಕ್ಷ ಸಭೆ ಬಳಿಕ ಮುಖ್ಯಕಾರ್ಯದರ್ಶಿ ಕಡೆಯಿಂದ ಮಾರ್ಗಸೂಚಿ ಹೇಳಿಸಿದ್ದಾರೆ. ಇನ್ನು ಪ್ರಧಾನಿ ಹೇಳಿದರು ಅನ್ನೋ ಕಾರಣಕ್ಕೆ, ರಾಜ್ಯಪಾಲರು ಸರ್ವಪಕ್ಷ ಸಭೆ ನಡೆಸಿರುವುದು ಸರಿಯಿಲ್ಲ.
ರಾಜ್ಯದಲ್ಲಿ 200 ಐಎಎಸ್, 400 ಕೆಎಎಸ್ ಅಧಿಕಾರಿಗಳಿದ್ದಾರೆ. ಅವರನ್ನ ಸರಿಯಾಗಿ ಬಳಸಿಕೊಳ್ಳಲು ಆಗ್ತಿಲ್ಲ. ಯಾವ ಸಚಿವರು ಸ್ಥಳಕ್ಕೆ ಹೋಗಿ ಪರಿಸ್ಥಿತಿ ಅರಿತು ಕೆಲಸ ಮಾಡ್ತಿಲ್ಲ. ಇದೊಂದು ಸೌಜನ್ಯವಿಲ್ಲದ ಸರ್ಕಾರ ಎಂದು ಡಿ.ಕೆ ಶಿವಕುಮಾರ ಕಿಡಿ ಕಾರಿದ್ದಾರೆ.