ಪ್ರಜಾಸ್ತ್ರ ಸುದ್ದಿ
ರಾಯಚೂರು: ಶಾಲಾ ಸಮವಸ್ತ್ರದಲ್ಲೇ ಮಗು ಮಲ ವಿಸರ್ಜನೆ ಮಾಡಿಕೊಂಡ ಕಾರಣಕ್ಕೆ ಕ್ರೂರ ಶಿಕ್ಷಕನೊಬ್ಬ ಬಿಸಿ ನೀರು ಎರೆಚಿದ ಘಟನೆ, ಜಿಲ್ಲೆಯ ಸಂತೆಕಲ್ಲೂರು ಗ್ರಾಮದಲ್ಲಿ ನಡೆದಿದೆ.
2ನೇ ತರಗತಿ ವಿದ್ಯಾರ್ಥಿ ಅಖಿತ್ ಅನ್ನೋ ಮಗುವಿನ ಶಿಕ್ಷಕ ಹುಲಿಗೆಪ್ಪ ಅಮಾನುಷವಾಗಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ. ನೀಚ ಶಿಕ್ಷಕನಿಂದಾಗಿ ಮಗುವಿನ ದೇಹ ಶೇಕಡ 40ರಷ್ಟು ಸುಟ್ಟಿದೆ ಎಂದು ಪೋಷಕರು ಹೇಳುತ್ತಿದ್ದಾರೆ. ಅಲ್ಲದೇ, ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ ಎಂದು ಆರೋಪಿಸಿದ್ದು, ಸಾರ್ವಜನಿಕರ ಆಕ್ರೋಶ ಹೆಚ್ಚಾಗಿದೆ.