ನಾನು ಈಗಲೂ ಗೋಮಾಂಸ ತಿನ್ನುತ್ತೇನೆ: ನಿರ್ದೇಶಕ ವಿವೇಕ್ ಅಗ್ನಿಹೋತ್ರಿ

402

ಪ್ರಜಾಸ್ತ್ರ ಸುದ್ದಿ

ಹಿಂದೂಗಳ ಭಾವನೆಗಳಿಗೆ ಘಾಸಿಗೊಳಿಸಿರುವುದು, ಗೋಮಾಂಸ ಸೇವನೆ ವಿಚಾರ ಸೇರಿದಂತೆ ಹಲವು ಕಾರಣಗಳಿಗೆ ಅದು ತುಂಬಾ ಹಳೆಯ ವಿಡಿಯೋಗಳನ್ನಿಟ್ಟುಕೊಂಡು ಬಾಲಿವುಡ್ ಸಿನಿಮಾಗಳನ್ನು ಬಾಯ್ ಕಟ್ ಮಾಡಲಾಗುತ್ತಿದೆ. ಶುಕ್ರವಾರ ರಿಲೀಸ್ ಆಗುತ್ತಿರುವ ರಣಬೀರ್ ಕಪೂರ್-ಆಲಿಯಾ ಭಟ್ ಜೋಡಿಯ ಬ್ರಹ್ಮಾಸ್ತ್ರ ಚಿತ್ರಕ್ಕೂ ವಿರೋಧ ವ್ಯಕ್ತವಾಗಿದೆ.

ಈಗ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ, ಗೋಮಾಂಸ ಸೇವನೆ ಮಾಡುವುದಾಗಿ ಹೇಳಿರುವ ವಿಡಿಯೋ ವೈರಲ್ ಆಗಿದೆ. ಮೊದಲು ಗೋಮಾಂಸ ಸೇವಿಸುತ್ತಿದ್ದೆ. ಈಗಲೂ ಸೇವನೆ ಮಾಡುತ್ತೇನೆ. ನನ್ನ ಜೀವನದಲ್ಲಿ ಏನೂ ಬದಲಾಗಿಲ್ಲ ಎಂದು ಹೇಳಿರುವ ವಿಡಿಯೋ ವೈರಲ್ ಆಗಿದೆ. ಹೀಗಾಗಿ ಯಾರೆಲ್ಲ ಬಾಯ್ ಕಟ್ ಎಂದು ಹೇಳುತ್ತಿದ್ದರೂ ಅವರೆಲ್ಲರ ವಿರುದ್ಧ ತಿರುಗಿ ಬೀಳಲಾಗಿದೆ.

ಸೋಷಿಯಲ್ ಮೀಡಿಯಾದಲ್ಲಿ ಬಲಪಂಥೀಯರ ವಿರುದ್ಧ ಕಿಡಿ ಕಾರಲಾಗುತ್ತಿದೆ. ಬಾಯ್ ಕಟ್ ಬೂಟಾಟಿಕೆಯಿಂದ ಹೊರ ಬನ್ನಿ. ವಿವೇಕ್ ಅಗ್ನಿಹೋತ್ರಿ ದೊಡ್ಡ ಗೋಮಾಂಸ ವ್ಯಕ್ತಿ ಎಂದು ವಾಗ್ದಾಳಿ ನಡೆಸಲಾಗುತ್ತಿದೆ.




Leave a Reply

Your email address will not be published. Required fields are marked *

error: Content is protected !!