ನೆರೆ ಸಂತ್ರಸ್ತರ ಜೊತೆ ನಿಲ್ಲುವೆ: ಸಿಎಂ ಬೊಮ್ಮಾಯಿ

231

ಪ್ರಜಾಸ್ತ್ರ ಸುದ್ದಿ

ಕಾರವಾರ: ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗುರುವಾರ ದಕ್ಷಿಣ ಕನ್ನಡ ಭಾಗದ ನೆರೆಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ರು. ಗಂಗಾವಳಿ ನದಿ ನೆರೆಯಿಂದ ಹಾನಿಗೊಳಗಾದ ಕಲ್ಲೇಶ್ವರ ಸೇತುವೆ ವೀಕ್ಷಿಸಿದ್ರು. ತಜ್ಞರ ತಂಡ ಕಳಿಸಿ ಆದಷ್ಟು ಬೇಗ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದ್ರು.

ಇದಾದ ಬಳಿಕ ಅಂಕೋಲ, ಶಿರೂರು ನೆರೆ ಪೀಡಿತ ಪ್ರದೇಶಗಳಿಗೂ ಭೇಟಿ ನೀಡಿದ್ರು. ಅಲ್ಲಿನ ಆರೈಕೆ ಕೇಂದ್ರಗಳಿಗೆ ಭೇಟಿ ನೀಡಿ ಸಾಂತ್ವಾನ ಹೇಳಿದ್ರು. ಅಲ್ದೇ ಅರಬೈಲ್ ಘಾಟ್ ಕುಸಿತು ಕಳಚಿ ಕ್ರಾಸ್ ನಲ್ಲಿ ಗುಡ್ಡ ಕುಸಿತ ವೀಕ್ಷಣೆ ಮಾಡಿದ್ರು. ಈ ವೇಳೆ ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ ಹಾಗೂ ಅಧಿಕಾರಿಗಳು ಸಾಥ್ ನೀಡಿದ್ರು.




Leave a Reply

Your email address will not be published. Required fields are marked *

error: Content is protected !!