ಹಬ್ಬದ ಖುಷಿಯ ಜೊತೆಗೆ ಗ್ರಾಹಕರ ಜೇಬಿಗೆ ಕತ್ತರಿ

360

ಬೆಂಗಳೂರು: ನಾಡಿನಾದ್ಯಂತ ದಸರಾ ಹಬ್ಬದ ಸಂಭ್ರಮ ಮನೆ ಮಾಡಿದೆ. ಹೀಗಾಗಿ ಪೂಜಾ ಸಾಮಗ್ರಿಗಳನ್ನ ಖರೀದಿಸುವ ಭರಾಟೆ ಜೋರಾಗಿದೆ. ಆದ್ರೆ, ಒಂದ್ಕಡೆ ಹಬ್ಬದ ಖುಷಿ. ಇನ್ನೊಂದ್ಕಡೆ ಗಗನಕ್ಕೆ ಏರಿಕೆಯಾಗಿರುವ ಬೆಲೆ. ಹೀಗಾಗಿ ಗ್ರಾಹಕರ ಜೇಬಿಗೆ ಕತ್ತರಿ ಬೀಳ್ತಿದೆ.

ಕೆ.ಆರ್ ಮಾರುಕಟ್ಟೆ, ಬೆಂಗಳೂರು

ಬೆಂಗಳೂರು ಸೇರಿದಂತೆ ಪ್ರತಿಯೊಂದು ಜಿಲ್ಲೆ, ತಾಲೂಕುಗಳಲ್ಲಿ ಹಣ್ಣು ಹಾಗೂ ಹೂವಿನ ಬೆಲೆ ಏರಿಕೆಯಾಗಿದೆ. ಇದ್ರಿಂದಾಗಿ ಗ್ರಾಹಕರು ಒಂದಿಷ್ಟು ಬೆಲೆ ಏರಿಕೆ ಬಿಸಿ ಅನುಭವಿಸ್ತಿದ್ದಾರೆ. ಯಾವ ಹೂವು, ಹಣ್ಣು ಏರಿಕೆಯಾಗಿದೆ ಅನ್ನೋದು ನೋಡುವುದಾದ್ರೆ..

ಯಾವ ಹೂವು ಎಷ್ಟು ಏರಿಕೆ?

ಜಾಜಿ ಮಲ್ಲಿಗೆ – 150-200

ಕಾಕಡ – 300-500

ಕನಕಾಂಬರ – 600-1500

ಸೇವಂತಿಗೆ – 40-120

ಹಣ್ಣುಗಳ ಬೆಲೆ ಏರಿಕೆ ಲಿಸ್ಟ್:

ಸೇಬು ಹಣ್ಣು – 80-120

ದ್ರಾಕ್ಷಿ ಹಣ್ಣು – 90-130

ಮೋಸಂಬಿ – 60-100

ಕಿತ್ತಳೆ – 50-80

ಹೀಗೆ ಪೂಜೆಗೆ ಬೇಕಾಗುವ ಪ್ರಮುಖ ಹೂವು ಹಾಗೂ ಹಣ್ಣುಗಳ ಬೆಲೆಯಲ್ಲಿ ಭರ್ಜರಿ ಏರಿಕೆಯಾಗಿದೆ. ಬ್ಯಾಗ್ ತುಂಬಿಕೊಂಡು ಹೋಗಬೇಕು ಅಂದ್ರೆ ಜೇಬು ಪೂರ್ತಿ ಖಾಲಿ ಮಾಡ್ಕೊಂಡು ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಗ್ರಾಹಕರು ಸಹ ಹೆಚ್ಚು ಕಡಿಮೆ ಮಾಡಿ ತೆಗೆದುಕೊಂಡು ಹೋಗ್ತಿರುವುದು ಅನಿವಾರ್ಯವಾಗಿದೆ.




Leave a Reply

Your email address will not be published. Required fields are marked *

error: Content is protected !!