ಯುವಕನ ಮೊಬೈಲ್ ಒಡೆದು ಕಪಾಳಕ್ಕೆ ಹೊಡೆದ ಡಿಸಿ

244

ಪ್ರಜಾಸ್ತ್ರ ಸುದ್ದಿ

ರಾಯಪುರ: ಕರೋನಾ ಲಾಕ್ ಡೌನ್ ಉಲ್ಲಂಘಿಸಿದ ಯುವಕನೊಬ್ಬನ ಕಪಾಳಕ್ಕೆ ಹೊಡೆದು ಆತನ ಮೊಬೈಲ್ ನ್ನ ಜಿಲ್ಲಾಧಿಕಾರಿ ಒಡೆದು ಹಾಕಿರುವ ಘಟನೆ ನಡೆದಿದೆ. ಛತ್ತೀಸಗಢದ ಸೂರಜಪುರದಲ್ಲಿ ಈ ಘಟನೆ ನಡೆದಿದೆ.

ಜಿಲ್ಲಾಧಿಕಾರಿ ರಣಬೀರ ಶರ್ಮಾ, ಸಾಹಿಲ್ ಗುಪ್ತಾ ಅನ್ನೋ ಯುವಕನ ಮೊಬೈಲ್ ಒಡೆದು, ಕೆನ್ನೆಗೆ ಹೊಡೆದಿದ್ದಾರೆ. ಬಳಿಕ ಪೊಲೀಸರು ಬಂದು ಲಾಠಿ ಬೀಸುತ್ತಾರೆ. ಡಿಸಿ ಹೀಗೆ ಏಕಾಏಕಿ ಸಿಟ್ಟಿಗೆದ್ದು ಯುವಕನ ಮೇಲೆ ಕೈ ಮಾಡಿರುವುದು ವೈರಲ್ ಆಗಿದ್ದು, ಆಕ್ರೋಶ ವ್ಯಕ್ತವಾಗಿದೆ.




Leave a Reply

Your email address will not be published. Required fields are marked *

error: Content is protected !!