ಪ್ರಜಾಸ್ತ್ರ ಸುದ್ದಿ
ರಾಯಪುರ: ಕರೋನಾ ಲಾಕ್ ಡೌನ್ ಉಲ್ಲಂಘಿಸಿದ ಯುವಕನೊಬ್ಬನ ಕಪಾಳಕ್ಕೆ ಹೊಡೆದು ಆತನ ಮೊಬೈಲ್ ನ್ನ ಜಿಲ್ಲಾಧಿಕಾರಿ ಒಡೆದು ಹಾಕಿರುವ ಘಟನೆ ನಡೆದಿದೆ. ಛತ್ತೀಸಗಢದ ಸೂರಜಪುರದಲ್ಲಿ ಈ ಘಟನೆ ನಡೆದಿದೆ.
ಜಿಲ್ಲಾಧಿಕಾರಿ ರಣಬೀರ ಶರ್ಮಾ, ಸಾಹಿಲ್ ಗುಪ್ತಾ ಅನ್ನೋ ಯುವಕನ ಮೊಬೈಲ್ ಒಡೆದು, ಕೆನ್ನೆಗೆ ಹೊಡೆದಿದ್ದಾರೆ. ಬಳಿಕ ಪೊಲೀಸರು ಬಂದು ಲಾಠಿ ಬೀಸುತ್ತಾರೆ. ಡಿಸಿ ಹೀಗೆ ಏಕಾಏಕಿ ಸಿಟ್ಟಿಗೆದ್ದು ಯುವಕನ ಮೇಲೆ ಕೈ ಮಾಡಿರುವುದು ವೈರಲ್ ಆಗಿದ್ದು, ಆಕ್ರೋಶ ವ್ಯಕ್ತವಾಗಿದೆ.