ಬೆಂಗಳೂರು: ನೂತನ ಡಿಸಿಎಂ ಲಕ್ಷ್ಮಣ ಸವದಿ ಅವರು ಹೈಕಮಾಂಡ್ ನನ್ಗೆ ಜವಾಬ್ದಾರಿ ನೀಡಿದೆ. ಉಪ ಮುಖ್ಯಮಂತ್ರಿ ಸ್ಥಾನ ಬಯಸದೆ ಬಂದ ಭಾಗ್ಯ. ಅದನ್ನ ಸಮರ್ಥವಾಗಿ ನಿಭಾಯಿಸಿ ಜನ ಸ್ನೇಹಿ ಆಡಳಿತ ನೀಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದ್ದಾರೆ.
ಮಾಜಿ ಡಿಸಿಎಂ ಡಾ.ಜಿ ಪರಮೇಶ್ವರ ಅವರ ರೀತಿಯಲ್ಲಿ ನಾನು ಝೀರೋ ಟ್ರಾಫಿಕ್ ಪಡೆಯುವುದಿಲ್ಲವೆಂದು ಹೇಳಿದ್ದಾರೆ. ಅಲ್ದೇ, ನನ್ಗೆ ಯಾರೂ ರಾಜಕೀಯ ವೈರಿಗಳಿಲ್ಲ. ಉಮೇಶ ಕತ್ತಿ, ಜಾರಕಿಹೊಳಿ ಕುಟುಂಬದ ಜೊತೆ ನನ್ಗೆ ಯಾವುದೆ ಮನಸ್ಥಾಪವಿಲ್ಲ. ನನ್ನನ್ನು ಮುಗಿಸಲು ಯಾರು ಪ್ರಯತ್ನ ಮಾಡಿಲ್ಲ ಅಂತಾ ತಿಳಿಸಿದ್ದಾರೆ. ಡಿಸಿಎಂ ಜೊತೆ ಸಾರಿಗೆ ಇಲಾಖೆ ಸಹ ನನ್ಗೆ ನೀಡಲಾಗಿದೆ. ಅದನ್ನ ಸಮರ್ಥವಾಗಿ ನಿಭಾಯಿಸುತ್ತೇನೆ ಅಂತಾ ಹೇಳಿದ್ದಾರೆ.
ಇನ್ನು ಇನ್ನೋರ್ವ ಡಿಸಿಎಂ ಡಾ.ಅಶ್ವಥನಾರಾಯಣ ಅವರು ಸಹ ಝೀರೋ ಟ್ರಾಫಿಕ್ ಪಡೆಯುವುದಿಲ್ಲವೆಂದು ಹೇಳಿದ್ದಾರೆ. ಮತ್ತೊಬ್ಬ ಡಿಸಿಎಂ ಗೋವಿಂದ ಕಾರಜೋಳ ಇದೆ ಹಾದಿ ತುಳಿಯುವ ಸಾಧ್ಯತೆಯಿದೆ.