ಜಮ್ಮು-ಕಾಶ್ಮೀರ: ಕಣಿವೆ ನಾಡಿನಲ್ಲಿ ಮಾಧ್ಯಮಗಳ ಮೇಲಿನ ನಿರ್ಬಂಧ ಸಿಡಿಲಿಸಬೇಕೆಂದು ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆಯನ್ನ ಇಂದು ಮಾಡಲಾಯ್ತು. ಕಾಶ್ಮೀರ್ ಟೈಮ್ಸ್ ಕಾರ್ಯನಿರ್ವಾಹಕ ಸಂಪಾದಕಿ ಅನುರಾಧಾ ಭೇಸನ್ ಸಲ್ಲಿಸಿದ್ದ ಅರ್ಜಿಯನ್ನ ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಿತು.
ನೆಟ್ ವರ್ಕ್, ಲ್ಯಾಂಡ್ ಲೈನ್ ಸಂಪರ್ಕ ಸೇರಿದಂತೆ ಸಂವಹನ ಸಾಧನಗಳ ಮೇಲೆ ಹೇರಿರುವ ನಿರ್ಬಧದ ಸಡಿಲಿಸುವ ವಿಚಾರವಾಗಿ 7 ದಿನದೊಳಗೆ ವಿವರವಾಗಿ ಪ್ರತಿಕ್ರಿಯೆ ನೀಡಿ ಎಂದು ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ನೋಟಿಸ್ ನೀಡಿದೆ.