ಪ್ರಜಾಸ್ತ್ರ ಸುದ್ದಿ
ನವದೆಹಲಿ: ಜನವರಿ 26ರಂದು ದೆಹಲಿಯಲ್ಲಿ ನಡೆದ ಹಿಂಸಾಚಾರದಲ್ಲಿ ಸುಮಾರು 300ಕ್ಕೂ ಹೆಚ್ಚು ಪೊಲೀಸರು ಗಾಯಗೊಂಡಿದ್ದಾರೆ. ಇದನ್ನ ಖಂಡಿಸಿ ನಿವೃತ್ತ ಪೊಲೀಸ್ ಸಿಬ್ಬಂದಿ ಪ್ರತಿಭಟನೆ ನಡೆಸಿದ್ದಾರೆ. ಭದ್ರತೆ ನೀಡ್ತಿದ್ದ ಪೊಲೀಸರಿಗೆ ಬೆದರಿಕೆ ಹಾಕಿ, ಗಾಯಗೊಳಿಸಿರುವವರ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದಾರೆ.
ಇಂದು ಕೂಡ ದೆಹಲಿಯಲ್ಲಿ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಐಟಿಒ ಕಡೆಯಿಂದ ಇಂಡಿಯಾ ಗೇಟ್ ಕಡೆ ಹೋಗುವ ಮಾರ್ಗ ಬದಲಾಯಿಸಲಾಗಿದೆ. ದೆಹಲಿಯಿಂದ ಗಾಜಿಯಾಬಾದ್ ಕಡೆ ಹೋಗುವ ವಾಹನಗಳು ಶಾದಾರ ಹಾಗೂ ಡಿಎನ್ ಡಿ ಮಾರ್ಗವಾಗಿ ಹೋಗಬೇಕೆಂದು ತಿಳಿಸಲಾಗಿದೆ.