ಪ್ರಜಾಸ್ತ್ರ ಬ್ರೇಕಿಂಗ್ ನ್ಯೂಸ್
ವಿಜಯಪುರ: ದೆಹಲಿಯಲ್ಲಿ ಜನವರಿ 26ರಂದು ನಡೆದ ಹಿಂಸಾಚಾರದ ಹಿಂದೆ ಚೀನಾ ಹಾಗೂ ಪಾಕ್ ಕೈವಾಡವಿದೆ. ಇದಕ್ಕೆ ಫಡಿಂಗ್ ಮಾಡಲಾಗಿದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಕಿಡಿ ಕಾರಿದ್ದಾರೆ.
ಪ್ರಧಾನ ಮಂತ್ರಿಗಳ ಹೆಸರನ್ನ ಹಾಳು ಮಾಡುವ ಉದ್ದೇಶದಿಂದ ವ್ಯವಸ್ಥಿತವಾಗಿ ಇದನ್ನ ಮಾಡಲಾಗಿದೆ. ರೈತರ ಭವಿಷ್ಯದ ದೃಷ್ಟಿಯಿಂದ ಈ ಮೂರು ತಿದ್ದುಪಡಿಗಳನ್ನ ಮಾಡಲಾಗಿದೆ. ಆದ್ರೆ, ಇದನ್ನ ವಿಫಲಗೊಳಿಸಲು ಕಾಂಗ್ರೆಸ್, ಆಮ್ ಆದ್ಮಿ, ಕಮ್ಯೂನಿಸ್ಟ್ ಪಕ್ಷಗಳ ಷಡ್ಯಂತ್ರವಿದೆ.
ರಾಷ್ಟ್ರ ಧ್ವಜ ಹಾರುವಲ್ಲಿ ಬೇರೆ ಬೇರೆ ಹಾರುವ ಷಡ್ಯಂತ್ರ ಮಾಡಲಾಗಿದೆ. ಅಂತವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸುತ್ತೇನೆ. ಮೋದಿ ಇನ್ನು 20 ವರ್ಷ ದೇಶ ಆಳುತ್ತಾರೆ ಅನ್ನೋ ಭಯದಿಂದ ಎಲ್ಲ ವಿರೋಧ ಪಕ್ಷಗಳು ಕೂಡಿಕೊಂಡು ಷಡ್ಯಂತ್ರ ಮಾಡುತ್ತಿವೆ.