ಬಿಜೆಪಿಯಲ್ಲೂ ಹೊಂದಾಣಿಕೆ ನಾಯಕರಿದ್ದಾರೆ: ಶಾಸಕ ಯತ್ನಾಳ

548

ಪ್ರಜಾಸ್ತ್ರ ಸುದ್ದಿ

ವಿಜಯಪುರ: ಸರ್ಕಾರ ಬರುವುದಕ್ಕೆ ಸಂಬಂಧಿಸಿದಂತೆ ನಾನು, ರೇಣುಕಾಚಾರ್ಯ ಅವರು ಏನು ಮಾಡಿದ್ದೇವೆ ಅನ್ನೋದು ಹೇಳಿಕೊಳ್ಳೋದು ಬೇಡ. ಈ ಸರ್ಕಾರ ಬರೋದಕ್ಕೆ ಬಹಳ ಜನರು ಜವಾಬ್ದಾರಿ ತೆಗೆದುಕೊಂಡಿದ್ದಾರೆ. ಈ ಸರ್ಕಾರಕ್ಕೆ ಬರೋದಕ್ಕೆ ಕಾರಣಿಕರ್ತರಾದವರು ಸಚಿವ ಸ್ಥಾನದಿಂದ ವಂಚಿತರಾಗಿದ್ದಾರೆ. ಯಾಕಂದರೆ, ನಮ್ಮಲ್ಲಿಯೂ ಕೆಲವು ಹೊಂದಾಣಿಕೆಗಳಿವೆ. ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಆರೋಪಿಸಿದರು.

ಕುಮಾರಸ್ವಾಮಿ, ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ಅವರ ಜೊತೆಗೆ ಹೊಂದಾಣಿಕೆ ಮಾಡಿಕೊಳ್ಳುವ ರಾಜಕಾರಣಿಗಳು ಇದಾರೆ. ಸಚಿವ ಸ್ಥಾನ ಸಿಗದಿದ್ದಕ್ಕೆ ಅನೇಕರು ಅಸಮಾಧಾನ ಗೊಂಡಿದ್ದಾರೆ. ಕೆಲವರು ಹೋಗುವವರು ಹೋಗುತ್ತಾರೆ, ಈ ಜಿಲ್ಲೆಯಲ್ಲೂ ಒಬ್ಬರು ಹೊಗೋಕೆ ಸಿದ್ಧವಾಗಿದ್ದಾರೆ. ಅವರು ಈಗಾಗ್ಲೇ ಒಂದು ಕಾಲು ಹೊರಗೆ ಇಟ್ಟಿದ್ದಾರೆ ಎಂದು  ಪರೋಕ್ಷವಾಗಿ ಮುದ್ದೇಬಿಹಾಳ ಶಾಸಕ ಎ.ಎಸ್ ಪಾಟೀಲ್ ನಡಹಳ್ಳಿಗೆ ಯತ್ನಾಳ ಟಾಂಗ್ ನೀಡಿದರು.




Leave a Reply

Your email address will not be published. Required fields are marked *

error: Content is protected !!