ಪ್ರಜಾಸ್ತ್ರ ಸುದ್ದಿ
ನವದೆಹಲಿ: ಜನವರಿ 26ರಂದು ದೆಹಲಿಯಲ್ಲಿ ನಡೆದ ಹಿಂಸಾಚಾರದ ವೇಳೆ ಗಾಯಗೊಂಡಿರುವ ಪೊಲೀಸರ ಆರೋಗ್ಯವನ್ನ ಕೇಂದ್ರ ಗೃಹ ಸಚಿವ ಅಮಿತ ಶಾ ವಿಚಾರಿಸಿದ್ರು. ತೀರತ್ ನಲ್ಲಿರುವ ರಾಮ ಶಾ ಆಸ್ಪತ್ರೆ ಹಾಗೂ ಅಶ್ರುತ ಟ್ರಾಮಾ ಸೆಂಟರ್ ಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ರು.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು ಪೊಲೀಸರ ಧೈರ್ಯ ಹಾಗೂ ಶೌರ್ಯ ಮೆಚ್ಚುವಂತದ್ದಾಗಿದೆ. ಈ ಘಟನೆಗೆ ಕಾರಣರಾದವರ ವಿರುದ್ಧ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತೆ ಎಂದು ಹೇಳಿದ್ರು.