ಅಕ್ರಮ ಸಂಬಂಧ ಸಾವಿನಲ್ಲಿ ಅಂತ್ಯ

343

ಪ್ರಜಾಸ್ತ್ರ ಸುದ್ದಿ

ರಾಯಚೂರು: ಅವರಿಬ್ಬರು ಬೇರೆ ಬೇರೆ ಮದುವೆಯಾಗಿದ್ದರೂ ಅಕ್ರಮ ಸಂಬಂಧ ಹೊಂದಿದ್ರು. ಕೊನೆಗೆ ನೇಣಿಗೆ ಶರಣಾಗುವ ಮೂಲಕ ಸಾವಿನಲ್ಲಿ ಅವರಿಬ್ಬರ ಕಥೆ ಅಂತ್ಯವಾಗಿದೆ. 30 ವರ್ಷದ ರಂಗಣ್ಣ ನಾಯಕ ಹಾಗೂ 18 ವರ್ಷದ ರಂಗಮ್ಮ ಆತ್ಮಹತ್ಯೆ ಮಾಡಿಕೊಂಡ ಜೋಡಿಯಾಗಿದೆ.

ದೇವದುರ್ಗ ತಾಲೂಕಿನ ಹೇಮನಾಳ ಗ್ರಾಮದಲ್ಲಿ ಈ ಒಂದು ಘಟನೆ ನಡೆದಿದೆ. ಕಳೆದ 6 ವರ್ಷಗಳ ಹಿಂದೆ ರಂಗಣ್ಣ ಮದುವೆಯಾಗಿದ್ದ. ಚಪ್ಪರ ಗುಂಡಿ ಮಸೀದಿ ಮೂಲದ ರಂಗಮ್ಮ ಸಹ ಮದುವೆಯಾಗಿದ್ದು ಗಂಡ ಬೆಂಗಳೂರಿನಲ್ಲಿ ಕೆಲಸ ಮಾಡ್ತಿದ್ದ. ಹೀಗಿದ್ರೂ ಇವರಿಬ್ಬರ ನಡುವೆ ಅಕ್ರಮ ಸಂಬಂಧ ಬೆಳದಿತ್ತು.

ರಂಗಣ್ಣನ ಪತ್ನಿ ಶಿವಮ್ಮ ಜಾತ್ರೆ ನಿಮಿತ್ತ ತವರೂರಾದ ಕೊತ್ತಿದೊಡ್ಡಿಗೆ ಹೋಗಿದ್ದಾಳೆ. ಈ ಕಡೆ ಗಂಗಮ್ಮ ಇವನ ಮನೆಗೆ ಬಂದಿದ್ದಾಳೆ. ಈ ವೇಳೆ ಇವರಿಬ್ಬರ ನಡುವೆ ಏನಾಗಿದೆ ಗೊತ್ತಿಲ್ಲ, ನೇಣಿಗೆ ಶರಣಾಗಿದ್ದಾರೆ. ಈ ಸಂಬಂಧ ದೇವದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




Leave a Reply

Your email address will not be published. Required fields are marked *

error: Content is protected !!