ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಬಿಜೆಪಿ ನಾಯಕಿ ಉಮಾ ಭಾರತಿ ಹಾಗೂ ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ ಗುಂಡೂರಾವ್ ಅವರಿಗೆ ಕೋವಿಡ್ 19 ಸೋಂಕು ದೃಢಪಟ್ಟಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಉಮಾ ಭಾರತಿ, ಸೋಂಕು ತಗುಲಿರುವುದನ್ನ ದೃಢಪಡಿಸಿದ್ದು, ಸ್ವಯಂಗೃಹ ಬಂಧನವಾಗಿದ್ದಾರೆ.
ಇನ್ನು ಮಾಜಿ ಸಚಿವ, ಶಾಸಕ ದಿನೇಶ ಗುಂಡೂರಾವ್ ಅವರಿಗೂ ಸೋಂಕು ದೃಢಪಟ್ಟಿದೆ. ಈ ಬಗ್ಗೆ ಇವರು ಸಹ ಟ್ವಿಟ್ ಮಾಡಿದ್ದು, ರೋಗ ಲಕ್ಷಣಗಳು ಇಲ್ಲದೆ ಸೋಂಕು ಕಾಣಿಸಿಕೊಂಡಿದೆ. ನಿಮ್ಮಲ್ಲರ ಹಾರೈಕೆಯಿಂದ ಬೇಗ ಚೇತರಿಸಿಕೊಳ್ಳುವ ವಿಶ್ವಾಸವಿದೆ ಎಂದಿದ್ದಾರೆ.