ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಕೋವಿಡ್ ಸಂದರ್ಭದಲ್ಲಿ ಭಾರತ ಸಾವಿನ ಮನೆಯಾಗಿತ್ತು. ಗಂಗೆಯಲ್ಲಿ ಹೆಣಗಳು ತೇಲಿ ಹೋಗಿವೆ. ಆಕ್ಸಿಜನ್ ಇಲ್ಲಿದೆ ಸಾಲು ಸಾಲು ಹೆಣಗಳು ಬಿದ್ದವು. ಹುಳಗಳಂತೆ ಜನರು ಸಾವನ್ನಪ್ಪಿದ್ದರು. ಆದರೆ, ಕೇಂದ್ರ ಸರ್ಕಾರ ಸತ್ಯ ಮರೆಮಾಚಿ ಪ್ರಚಾರ ಗಿಟ್ಟಿಸಿಕೊಂಡಿತು ಎಂದು ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ ವಾಗ್ದಾಳಿ ನಡೆಸಿದ್ದಾರೆ.
ಡಬ್ಲುಎಚ್ಓ ವರದಿ ಪ್ರಕಾರ ಭಾರತದಲ್ಲಿ ಕೋವಿಡ್(2020-21) ನಿಂದಾಗಿ 47 ಲಕ್ಷ ಜನರು ಮೃತಪಟ್ಟಿದ್ದಾರೆ. ಆದರೆ, ಕೇಂದ್ರ ಸರ್ಕಾರ 4.8 ಲಕ್ಷ ಎಂದು ಸುಳ್ಳು ಹೇಳಿದೆ. ವಿಶ್ವ ಆರೋಗ್ಯ ಸಂಸ್ಥೆಯು ಮೋದಿ ಸರ್ಕಾರದ ಸುಳ್ಳಿನ ಲೆಕ್ಕ ಬಯಲು ಮಾಡಿದೆ. ಸತ್ತವರ ಮನೆಯ ಶಾಪ ತಟ್ಟದೆ ಇರದೆ ಎಂದರು.
ಕೋವಿಡ್ ಸಂದರ್ಭದಲ್ಲಿಯೂ ಮೋದಿ ಅವರ ಪ್ರಚಾರದ ಹುಚ್ಚು. ನಿರ್ಲಕ್ಷ್ಯದಿಂದಾಗಿ 47 ಲಕ್ಷ ಜನರ ಸಾವಿಗೆ ಕಾರಣವಾಗಿದೆ. ಇದಕ್ಕೆ ಕೇಂದ್ರ ಸರ್ಕಾರವೇ ಹೊಣೆ. ಕರೋನಾ ಗೆದ್ದಿದೆ ಎಂದು ಸುಳ್ಳು ಹೇಳಿ ಪ್ರಚಾರ ಗಿಟ್ಟಿಸಿಕೊಂಡರ ಹಣೆಬರಹ ಇದು ಅಂತಾ ಕಿಡಿ ಕಾರಿದರು.