ಸೆಕೆ ಎಂದು ಹೊರಗೆ ಮಲಗಿದವನ ಮರ್ಡರ್

313

ಪ್ರಜಾಸ್ತ್ರ ಅಪರಾಧ ಸುದ್ದಿ

ಕಲಬುರಗಿ: ರಾತ್ರಿ ಕರೆಂಟ್ ಹೋದ ಪರಿಣಾಮ ಸೆಕೆ ಎಂದು ಹೊರಗೆ ಬಂದು ಮಲಗಿದ ಯುವಕನ ಹತ್ಯೆಯಾಗಿ ಹೋಗಿದೆ. ರಾಯಚೂರು ತಾಲೂಕಿನ ಮರ್ಚಡ ಗ್ರಾಮದ ತಾಯಪ್ಪ(26) ಕೊಲೆಯಾದ ದುರ್ದೈವಿ.

ಕಳೆದ ರಾತ್ರಿ ಕರೆಂಟ್ ಹೋದ ಪರಿಣಾಮ ಸೆಕೆಯಾಗ್ತಿದೆ ಎಂದು ಹೊರಗೆ ಬಂದಿದ್ದಾನೆ. ಮನೆ ಹತ್ತಿರದ ದೇವಸ್ಥಾನದ ಬಳಿ ಸ್ವಲ್ಪ ಹೊತ್ತು ಕುಳಿತಿದ್ದಾನಂತೆ. ಆದ್ರೆ, ಬೆಳಗಾಗುವಷ್ಟರಲ್ಲಿ ಮನೆಯ ಬಾಗಿಲ ಮುಂದೆಯೇ ಹೆಣವಾಗಿ ಬಿದ್ದಿದ್ದ. ಯಾರೋ ದುಷ್ಕರ್ಮಿಗಳು ಕತ್ತು ಕೊಯ್ದು ಕೊಲೆ ಮಾಡಿದ್ದಾರೆ.

ಸ್ಥಳಕ್ಕೆ ರಾಯಚೂರು ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಹಳೆ ದ್ವೇಷದ ಹಿನ್ನೆಲೆಯಲ್ಲಿ ಕೊಲೆ ನಡೆದಿದೆ ಎನ್ನಲಾಗ್ತಿದ್ದು, ಮರಣೋತ್ತರ ಪರೀಕ್ಷೆಗಾಗಿ ರಿಮ್ಸ್ ಆಸ್ಪತ್ರೆಗೆ ಮೃತದೇಹ ಕಳಿಸಲಾಗಿದೆ. ಮಗನನ್ನ ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.




Leave a Reply

Your email address will not be published. Required fields are marked *

error: Content is protected !!