ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಕರ್ನಾಟಕದಲ್ಲಿ ಗೋವು ಹತ್ಯೆ ನಿಷೇಧ ಕಾಯ್ದೆ ಜಾರಿಗೆ ತಂದಿರುವ ಬಿಜೆಪಿ ಸರ್ಕಾರದ ಕ್ರಮವನ್ನ ಸಿ.ಟಿ ರವಿ ಅವರು ಸಮರ್ಥಿಸಿಕೊಳ್ತಿದ್ದಾರೆ. ಗೋವಾ ಉಸ್ತುವಾರಿಯಾಗಿರುವ ಸಿ.ಟಿ ರವಿ ಅವರು ಗೋವಾದಲ್ಲಿ ಗೋವು ಹತ್ಯೆ ನಿಷೇಧ ಮಾಡುವ ಧೈರ್ಯ ಇದ್ಯಾ ಎಂದು ಕಾಂಗ್ರೆಸ್ ಹಿರಿಯ ನಾಯಕ ದಿನೇಶ ಗುಂಡೂರಾವ ಸವಾಲು ಹಾಕಿದ್ದಾರೆ.
ಸಿ.ಟಿ ರವಿಯವರು ಗೋವಾದಲ್ಲಿ ಗೋವು ಮಾಂಸ ಸರಬರಾಜಿಗೆ ಟೆಂಡರ್ ಪಡೆದಿದ್ದಾರೆಯೆ ಎಂದು ವಾಗ್ದಾಳಿ ನಡೆಸಿರುವ ಗುಂಡೂರಾವ, ಕರ್ನಾಟಕದಲ್ಲಿ ಪೂಜ್ಯನೀಯವಾದ ಗೋವು ಗೋವಾದಲ್ಲಿ ಏನು ಎಂದು ಪ್ರಶ್ನೆ ಮಾಡಿದ್ದಾರೆ. ಗೋವು ಹತ್ಯೆ ನಿಷೇಧ ವಿಚಾರದಲ್ಲಿ ಬಿಜೆಪಿ ನಾಯಕರು ದ್ವಿಮುಖ ನೀತಿ ಅನುಸರಿಸ್ತಿದ್ದಾರೆ ಎಂದು ಕಿಡಿ ಕಾರಿದ್ರು.