ಪ್ರಜಾಸ್ತ್ರ ಸುದ್ದಿ
ವಿಜಯಪುರ: ಬ್ರಿಟನ್ ನಲ್ಲಿ ಕರೋನಾ ಹೊಸ ರೂಪಾಂತರ ವೈರಸ್ ನಿಂದಾಗಿ ಜಗತ್ತು ಮತ್ತೆ ಕಂಗಾಲಾಗಿದೆ. ಹೀಗಾಗಿ ವಿದೇಶದಿಂದ ದೇಶಕ್ಕೆ ಬರ್ತಿರುವ ಪ್ರತಿಯೊಬ್ಬರ ಮೇಲೆ ತೀವ್ರ ನಿಗಾ ವಹಿಸಲಾಗ್ತಿದೆ. ಇದೆಲ್ಲದರ ನಡುವೆ 6 ಜನ ಗುಮ್ಮಟನಗರಿಗೆ ಬಂದಿದ್ದು, ಜನರಲ್ಲಿ ಆತಂಕ ಮೂಡಿದೆ.
ಯುಕೆನಿಂದ ವಿಜಯಪುರ ಮೂಲದ 12 ಜನರು ಬಂದಿದ್ದಾರೆ. ಇದರಲ್ಲಿ 6 ಜನರು ವಿಜಯಪುರಕ್ಕೆ ಆಗಮಿಸಿಲ್ಲ. ಅವರು ಬೆಂಗಳೂರಿನಲ್ಲಿ ಉಳಿದುಕೊಂಡಿದ್ದಾರೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲಕುಮಾರ ತಿಳಿಸಿದ್ದಾರೆ. ಇನ್ನು 4 ಜನರು ವಿಜಯಪುರದ ಹಲಗಣಿಯವರು, 2 ವಿಜಯಪುರ ನಗರದಲ್ಲಿದ್ದಾರೆ.
ಕಳೆದ ರಾತ್ರಿಯೇ ಆರೋಗ್ಯ ಇಲಾಖೆ ಸಿಬ್ಬಂದಿ ಅವರನ್ನ ಸಂಪರ್ಕಿಸಿ ಕ್ವಾರೆಂಟೈನ್ ಮಾಡಿದ್ದಾರೆ. RAT ಹಾಗೂ RTPCR ಪರೀಕ್ಷೆಗೆ ಒಳಪಡೆಸಲಿದ್ದಾರೆ. ಮುಂದಿನ ಕ್ರಮಗಳಿಗೆ ಜಿಲ್ಲಾಡಳಿತ ಸನ್ನದ್ಧವಾಗಿದೆ ಎಂದ ಜಿಲ್ಲಾಧಿಕಾರಿ ಸುನೀಲಕುಮಾರ ಅವರು ಮಾಹಿತಿ ನೀಡಿದ್ದಾರೆ.