ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಡಿಸಿಎಂ ಡಿ.ಕೆ ಶಿವಕುಮಾರ್ ವಿರುದ್ಧದ ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣದ ತನಿಖೆಯನ್ನು ಸಿಬಿಐಗೆ ನೀಡಿದ್ದನ್ನು ವಾಪಸ್ ಪಡೆದ ಸರ್ಕಾರದ ವಿರುದ್ಧ ವಿಪಕ್ಷಗಳು ಕಿಡಿ ಕಾರುತ್ತಿವೆ. ಜೆಡಿಎಸ್ ಮಾಜಿ ಸಿಎಂ ಕುಮಾರಸ್ವಾಮಿ ಮಾತನಾಡಿ, ಲೂಟಿ, ಕೊಳ್ಳೆ ಹೊಡೆಯುವವರ ಎನ್ನುವುದನ್ನು ಸರ್ಕಾರ ಸಂದೇಶ ನೀಡಿದೆ ಎಂದರು.
ಈ ಬಗ್ಗೆ ಕೋರ್ಟ್ ನಲ್ಲಿ ಈಗಾಗ್ಲೇ ಎರಡು ಬಾರಿ ವಿಚಾರಣೆಯಾಗಿದೆ. ಇಂತಹ ಪ್ರಕರಣದಲ್ಲಿ ಸುಪ್ರಿಂ ಕೋರ್ಟ್ ನೀಡಿರುವ ತೀರ್ಪುಗಳು ಕಣ್ಮುಂದೆ ಇವೆ. ಕೋರ್ಟ್ ಮುಂದೆ ಪ್ರಕರಣ ಇದ್ದಾಗ ಸರ್ಕಾರ ಏಕಾಏಕಿ ತಪ್ಪು ನಿರ್ಧಾರ ತೆಗೆದುಕೊಂಡು ಕಾನೂನಿಗಿಂತ ದೊಡ್ಡವರು ಎಂದು ಪ್ರದರ್ಶಿಸಿದೆ ಅಂತಾ ಹೇಳಿದರು.
ಈ ಕುರಿತು ಸಚಿವ ಸಂಪುಟದಲ್ಲಿ ಅನುಮೋದನೆ ಪಡೆಯುವ ಸಲುವಾಗಿ ಮೂರು ದಿನಗಳ ಹಿಂದೆ ಹಿರಿಯ ವಕೀಲರೊಂದಿಗೆ ಚರ್ಚಿಸಲಾಗಿದೆ. ಇದು ನನ್ನ ಗಮನಕ್ಕಿದೆ. ಸಿಬಿಐಗೆ ಕೊಡಲು ಹಿಂದಿನ ಸರ್ಕಾರ ಸ್ಪೀಕರ್ ಅನುಮತಿ ಪಡೆದಿಲ್ಲ ಎಂದಾದರೆ ವಾಪಸ್ ಪಡೆಯಲು ಸ್ಪೀಕರ್ ಅನುಮತಿ ಪಡೆದಿದ್ದಾರಾ ಎಂದು ಪ್ರಶ್ನಿಸಿದರು. ಅಕ್ರಮಗಳನ್ನು ಮುಚ್ಚಿ ಹಾಕುವಲ್ಲಿ ಸಿದ್ದರಾಮಯ್ಯ ನಿಪುಣರು ಅಂತಾ ಆರೋಪಿಸಿದರು.