ಬೂಂದಿ: ಮದುವೆಗೆ ಹೊರಟಿದ್ದ ಬಸ್ ವೊಂದು ನದಿಗೆ ಉರುಳಿಬಿದ್ದ ಪರಿಣಾಮ ಬರೋಬ್ಬರಿ 24 ಮಂದಿ ಜಲಸಮಾಧಿಯಾದ ಘಟನೆ ರಾಜಸ್ಥಾನದ ಬೂಂದಿ ಜಿಲ್ಲೆಯಲ್ಲಿ ನಡೆದಿದೆ. ಬಸ್ ಕೋಟಾದಿಂದ ಸವಾಯಿಮಾಧೋಪರ್ ಕಡೆಗೆ ಹೊರಟಿದ್ದ ಬಸ್ ನದಿಗೆ ಉರುಳಿ ಬಿದ್ದಿದೆ.
30 ಜನರನ್ನ ಹೊತ್ತುಕೊಂಡು ಪಾಪಡೀ ಗ್ರಾಮದ ಸಮೀಪ ಹೊರಟಿದ್ದ ಬಸ್, ಮೇಜ್ ನದಿಗೆ ಉರುಳಿ ಬಿದ್ದಿದೆ. ಸ್ಥಳೀಯರು ನದಿಗೆ ಹಾರಿ ಹಲವರನ್ನ ರಕ್ಷಿಸಿದ್ದಾರೆ. ಗ್ರಾಮಸ್ಥರು ಹೇಳುವ ಪ್ರಕಾರ 15 ಮಂದಿ ಸಾವನ್ನಪ್ಪಿದ್ದಾರೆ ಅನ್ನೋದು ತಿಳಿದು ಬಂದಿದೆ. ಸ್ಥಳಕ್ಕೆ ರಕ್ಷಣಾ ತಂಡ ಬಂದಿದ್ದು ರಕ್ಷಣಾ ಕಾರ್ಯ ನಡೆದಿದೆ.