ಕಾಂಗ್ರೆಸ್ ಹಿಡನ್ ಅಝಂಡಾ ಬಯಲು ಮಾಡಿದ್ದೇನೆ: ಪ್ರಧಾನಿ ಮೋದಿ

77

ಪ್ರಜಾಸ್ತ್ರ ಸುದ್ದಿ

ಜೈಪುರ: ರಾಜಸ್ಥಾನದ ಜೈಪುರದಲ್ಲಿ ಚುನಾವಣೆ ಸಮಾವೇಶ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಮತ್ತೆ ಧಾರ್ಮಿಕ ವಿಚಾರದ ಮೇಲೆ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ಅಧಿಕಾರದಲ್ಲಿ ಹನುಮಾನ್ ಚಾಲೀಸ್ ಕೇಳುವುದು ಅಪರಾಧ ಎಂದಿದ್ದಾರೆ.

ಟೊಂಕ್ ನಲ್ಲಿ ಮಂಗಳವಾರ ಮಾತನಾಡಿದ ಪ್ರಧಾನಿ ಮೋದಿ, ದೇಶದ ಸಂಪತ್ತಿನ ಮರು ಹಂಚಿಕೆ ಬಗ್ಗೆ ಮತ್ತೆ ಪುನರುಚ್ಚರಿಸಿದರು. ಕಾಂಗ್ರೆಸ್ ಪ್ರಣಾಳಿಕೆಯಲ್ಲಿನ ಸಂಪತ್ತಿನ ಸಮೀಕ್ಷೆ ಬಗ್ಗೆ ಹೇಳಿದ್ದಕ್ಕೆ ಇಂಡಿಯಾ ಮೈತ್ರಿಕೂಟ ನನ್ನನ್ನು ನಿಂದಿಸುತ್ತಿದೆ.

ದೇಶದ ಸಂಪತ್ತನ್ನು ಕಿತ್ತುಕೊಂಡು ಆಯ್ದ ಜನರಿಗೆ ಹಂಚುವ ಹಿಡನ್ ಅಝಂಡಾ ಬಯಲು ಮಾಡಿದ್ದೇನೆ. ಸತ್ಯಕ್ಕೆ ಕಾಂಗ್ರೆಸ್ ಯಾಕೆ ಹೆದರಬೇಕು. ಇದು ಮೈತ್ರಿಕೂಟವನ್ನು ಕೆರಳಿಸಿದೆ ಅಂತಾ ಹೇಳಿದರು.




Leave a Reply

Your email address will not be published. Required fields are marked *

error: Content is protected !!