ಬೆಂಗಳೂರು: ಮಂಗಳವಾರ ಸಂಜೆ ಮಾರತ್ತಹಳ್ಳಿಯ ಮುನೇಕೊಳಲು ಹತ್ತಿರ ಯುವತಿಯೊಬ್ಬಳ ಮೇಲೆ ನಡೆದ ಶೂಟೌಟ್ ಪ್ರಕರಣದ ಹಿಂದಿನ ಅಸಲಿ ಕಹಾನಿ ಹೊರ ಬಂದಿದೆ. ಒರಿಸ್ಸಾ ಮೂಲದ ಶುಭಶ್ರೀ ಪ್ರಯದರ್ಶಿನಿ ಅನ್ನೋ ಯುವತಿ ಮೇಲೆ ನಿನ್ನೆ ಸಂಜೆ 6 ಗಂಟೆಗೆ ಗುಂಡು ಹಾರಿಸಲಾಗಿದೆ. ಶೂಟ್ ಮಾಡಿದ ವ್ಯಕ್ತಿ ಗನ್ ಅಲ್ಲೆ ಬಿಟ್ಟು ಹೋಗಿದ್ದ. ಯುವತಿಯನ್ನ ತಕ್ಷಣ ಆಸ್ಪತ್ರೆಗೆ ಸಾಗಿಸಲಾಗಿದೆ.
ಕಳೆದ 2 ವರ್ಷಗಳಿಂದ ನಿಮ್ಹಾನ್ಸ್ ನಲ್ಲಿ ಕೆಲಸ ಮಾಡ್ತಿರುವ ಒರಿಸ್ಸಾ ಮೂಲದ ಶುಭಶ್ರೀ ಹಾಗೂ ಅಮರೇಂದ್ರ ಪಟ್ನಾಯಕ್ ಇಬ್ಬರು ಪ್ರೀತಿಸ್ತಿದ್ರು. ಇವರಿಬ್ಬರೂ ಮೂಲತಃ ಒರಿಸ್ಸಾದವರಾಗಿದ್ದು, ಆದ್ರೆ, ಯಾವುದೋ ಕಾರಣಕ್ಕೆ ಲವ್ ಬೇಕಪ್ ಆಗಿದೆ. ಬಳಿಕ ಅಮರೇಂದ್ರ ಬೇರೊಂದು ಹುಡ್ಗಿಯೊಂದಿಗೆ ನಿಶ್ಚಿಯ ಮಾಡಿಕೊಂಡಿದ್ದ ಇಂದು ಮದುವೆ ನಡೆಯಬೇಕಿತ್ತು. ಆದ್ರೆ, ಶುಭಶ್ರೀ ತಾವಿಬ್ಬರೂ ಜೊತೆಗಿರುವ ಫೋಟೋವನ್ನ ಮದುವೆಯಾಗುವ ಹುಡ್ಗಿಗೆ ಕಳಿಸಿದ್ದಾಳೆ. ಇದ್ರಿಂದಾಗಿ ಮದುವೆ ಮುರಿದು ಬಿದ್ದಿತ್ತು.
ಯಾವಾಗ ಮದುವೆ ಮುರಿದು ಬಿತ್ತೋ ಅಮರೇಂದ್ರ ಮಾಜಿ ಪ್ರೇಯಸಿಯನ್ನ ಕೊಲ್ಲುವ ಪ್ಲಾನ್ ಮಾಡಿದ. ಹೀಗಾಗಿ ಹೈದ್ರಾಬಾದ್ ನಲ್ಲಿ ಇಂಜಿನಿಯರಿಂಗ್ ಕೆಲಸ ಮಾಡ್ತಿದ್ದ ಇವನು ಬೆಂಗಳೂರಿಗೆ ಬಂದು, ಆಕೆಯ ಪಿಜಿ ಬಳಿ ಕಾಯುತ್ತಾ ನಿಂತಿದ್ದ. ಸಂಜೆ ಸುಮಾರು 6 ಗಂಟೆ ಟೈಂಗೆ ಶುಭಶ್ರೀ ಪಿಜಿ ಬಳಿ ಬಂದಾಗ ಆಕೆ ಮೇಲೆ ಗುಂಡು ಹಾರಿಸಿ ಎಸ್ಕೇಪ್ ಆಗಿದ್ದಾನೆ. ಆರೋಪಿ ಪತ್ತೆಗೆ ವಿಶೇಷ ತನಿಖಾ ತಂಡ ರಚನೆ ಮಾಡಿದ ಪೊಲೀಸ್ರು ಅಮರೇಂದ್ರನ ಮಾಹಿತಿ ಹಚ್ಚಿದ್ರು. ಅಷ್ಟರಲ್ಲಿಯೇ ಈತ ಇಂದು ಬೆಳಗ್ಗೆ ಲೆಟರ್ ಬರೆದಿಟ್ಟು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಇದೀಗ ಇಬ್ಬರಿಗೂ ಒಂದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡ್ತಿದ್ದು, ಅವರು ಚೇತರಿಸಿಕೊಂಡ್ಮೇಲೆ ಮಾಹಿತಿ ಪಡೆಯಲಾಗುವುದು ಎಂದು ವೈಟ್ ಫಿಲ್ಡ್ ಡಿಸಿಪಿ ಅನುಚೇತನ ತಿಳಿಸಿದ್ದಾರೆ.